ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ 75ನೇ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಮಂಡಲ ಉಪಾಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಕಾಂಗ್ರೆಸ್ ಹಿರಿಯ ನೇತಾರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿಜಿ ಚಂದ್ರಹಾಸ ರೈ ಉದ್ಘಾಟಿಸಿ ಪುಷ್ಪಾರ್ಚನೆ ಮಾಡಿದರು. ಗಾಂಧೀಜಿಯ ತತ್ವ ಆದರ್ಶಗಳು ಶಾಶ್ವತ, ಅದನ್ನು ಯುವ ತಲೆಮಾರಿನ ಕಾಂಗ್ರೆಸ್ ಕಾರ್ಯಕರ್ತರು ಪಾಲಿಸಿಕೊಂಡು ಮುಂದುವರಿಯಬೇಕು ಎಂದು ಈ ಸಂದಭ್ ಕರೆನೀಡಿದರು.
ನೇತಾರರಾದ ಚಂದ್ರಹಾಸ ಮಾಸ್ತರ್, ಶಾಫಿ ಗೊಳಿಯಡ್ಕ, ಗೋಪಾಲ ದರ್ಬೆತಡ್ಕ, ರಾಮಕೃಷ್ಣ ವಿದ್ಯಾಗಿರಿ, ಶಾಫಿ ಗೊಳಿಯಡಿ, ಲೋಹಿತಾಕ್ಷ ಪಟ್ಟಾಜೆ, ಶ್ರೀನಾಥ ಬದಿಯಡ್ಕ ಉಪಸ್ಥಿತರಿದ್ದರು.