HEALTH TIPS

ಸಫಲಂ ಕಾರ್ನಿವಲ್‍ನ ಮೊದಲ ಟಿಕೆಟ್‍ಗಳ ವಿತರಣೆ


               ಕಾಸರಗೋಡು: ಫೆಬ್ರವರಿ 19 ರಿಂದ 28 ರವರೆಗೆ ಪಿಲಿಕೋಡ್ ನಲ್ಲಿ ನಡೆಯಲಿರುವ 'ಸಫಲಂ' ಆರ್‍ಎಆರ್‍ಎಸ್ ಫಾರ್ಮ್ ಕಾರ್ನಿವಲ್ 2023 ರ ಅಂಗವಾಗಿ, ಆರ್‍ಎಆರ್‍ಎಸ್ ಕಾರ್ನೀವಲ್‍ನ ಮೊದಲ ಟಿಕೆಟ್ ವಿತರಣೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಯುವಕರು ಮತ್ತು ಮಕ್ಕಳನ್ನು ಕೃಷಿಯತ್ತ ಆಕರ್ಷಿಸುವ ಉದ್ದೇಶದಿಂದ ಆಯೋಜಿಸಿದೆ. ಚಿತ್ರಕಲಾ ಸ್ಪರ್ಧೆಯಲ್ಲಿ 56 ಶಾಲೆಗಳ 131 ಮಕ್ಕಳು ಭಾಗವಹಿಸಿದ್ದರು.
             ನೀಲೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯೇರ ಟಿಕೆಟ್ ವಿತರಣೆಯನ್ನು ಉದ್ಘಾಟಿಸಿದರು. ಪಿಲಿಕೋಡು ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಡಾ.ಟಿ.ವನಜ ಅಧ್ಯಕ್ಷತೆ ವಹಿಸಿದ್ದರು. ಪಿಲಿಕೋಡು ಪಂಚಾಯಿತಿಯ ಉತ್ತಮ ಯುವ ರೈತ ಕೆ.ಮನೋಜ್ ಮೊದಲ ಚೀಟಿ ಪಡೆದರು. ಶಾಲಾ ಮಕ್ಕಳ ಚಿತ್ರ ಬರೆಯುವ ಸ್ಪರ್ಧೆಯನ್ನು ಪಿಲಿಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ಪ್ರಸನ್ನ ಕುಮಾರಿ ಉದ್ಘಾಟಿಸಿದರು. ಸ್ಪರ್ಧೆಯಲ್ಲಿ 56 ಶಾಲೆಗಳ 131 ಮಕ್ಕಳು ಭಾಗವಹಿಸಿದ್ದರು. ಲತೀಫ್ ನೀಲಗಿರಿ, ಪೆÇ್ರ.ಡಾ.ಸಜಿತಾರಾಣಿ, ಪಿ.ಕೆ.ರತೀಶ್, ಡಾ.ವಿ.ನಿಶಾ ಲಕ್ಷ್ಮಿ, ಪಿ.ಅಜಿತ್ ಕುಮಾರ್ ಮಾತನಾಡಿದರು.





 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries