HEALTH TIPS

ಕೋಳಿ ಅಂಗಡಿ ನಷ್ಟದಲ್ಲಿ, ನೀವೇ ಕಾರಣ: ವಿಭಿನ್ನ ಪರಿಹಾರೋಪಾಯದತ್ತ ಮನಮಾಡಿದ ಆದೂರಿನ ವ್ಯಾಪಾರಿ


          ಮುಳ್ಳೇರಿಯ: ಕೋಳಿ ಅಂಗಡಿ ನಡೆಸುತ್ತಿದ್ದ ವ್ಯಾಪಾರಿಯೊಬ್ಬನ ಕಥೆ  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಾಜಿ ಅನಿವಾಸಿ ಹ್ಯಾರಿಸ್ ಮುಳ್ಳೇರಿಯ ಸಮೀಪದ ಆದೂರಿನಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದು, ಅವರ ವಿಚಾರ ವ್ಯಾಪಕ ಪ್ರಚಾರಕ್ಕೊಳಗಾಗಿದೆ.
           ಅನೇಕರು ತಮ್ಮ ಮನೆಯ ವಿವಿಧ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕೋಳಿಮಾಂಸವನ್ನು ತಾನು ವಿತರಿಸಿದ್ದೇನೆ. ಆದರೆ ಅನೇಕರು ಹಣ ನೀಡದೆ ತನ್ನ ಸ್ಥಿತಿ ಶೋಚನೀಯತೆಯತ್ತ ಸಾಗಿದೆ ಎಂಬ ಅವರ ಅಂಗಡಿ ಎದುರಿನ ಫಲಕ ಗಮನ ಸೆಳೆದಿದೆ.
            'ಕೋಳಿ ಸಾಲ ಮಾಡಿ ಕೊಡದ ನೀನೇ ಈ ಅಂಗಡಿ ಮುಚ್ಚಲು ಕಾರಣ. ಖರೀದಿಸಿದ ಮಾಂಸದ ಹಣವನ್ನು  ತಕ್ಷಣ ನೀಡಬೇಕು, ಇಲ್ಲವಾದಲ್ಲಿ ಅಂತವರ ಹೆಸರು ಇಲ್ಲಿ ಬಹಿರಂಗ ಪಡಿಸಲಾಗುವುದು’ ಎಂದು ಬೃಹತ್ ಫಲಕವನ್ನು ಅಂಗಡಿ ಎದುರು ಸ್ಥಾಪಿಸಿದ್ದಾರೆ. ಕೋಳಿ ಸಾಲ ಪಡೆದವರು ತೀರಿಸದೇ ಆರ್ಥಿಕ ನಷ್ಟ ಅನುಭವಿಸಿ ಹ್ಯಾರಿಸ್ ಅಂಗಡಿ ಮುಂದೆ ಹಾಕಿರುವ ಬೋರ್ಡ್ ದೊಡ್ಡ ಆರ್ಥಿಕ ಬಿಕ್ಕಟ್ಟು ಎದುರಿಸಿದ ಕಾರಣ ದುರಾದೃಷ್ಟದಿಂದ ಈ ರೀತಿ ಮಾಡಿದೆ ಎಂದು ಹ್ಯಾರಿಸ್ ಹೇಳುತ್ತಾರೆ.
            ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ದುಬೈನಲ್ಲಿ ಕೆಲಸ ತೊರೆದು ದೇಶಕ್ಕೆ ಮರಳಿದ್ದರು. ಏತನ್ಮಧ್ಯೆ, ಒಂದೂವರೆ ವರ್ಷದ ಹಿಂದೆ ಜೀವನೋಪಾಯಕ್ಕಾಗಿ ಕೋಳಿ ಅಂಗಡಿ ಪ್ರಾರಂಭಿಸಲಾಯಿತು. ಅಲ್ಪ ಆದಾಯ ಬಂದರೂ ಹಲವರು ಸಾಲ ಮಾಡಿ ಕೋಳಿ ಖರೀದಿಸಿದ್ದು ದೊಡ್ಡ ಹಿನ್ನಡೆಯಾಗಿದೆ. ಮನೆಗಳಲ್ಲಿನ ಸಣ್ಣ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯ ಕೋಳಿ ಮಾಂಸ  ನೀಡಲಾಗಿದೆ ಎಂದು ಹ್ಯಾರಿಸ್ ಹೇಳಿರುವÀರು. ಆದರೆ ಅನೇಕರು ಇನ್ನೂ ಹಣ ಪಾವತಿಸಿಲ್ಲ.
           ವಿವಿಧ ವ್ಯಕ್ತಿಗಳಿಂದ ಸುಮಾರು 55 ಸಾವಿರ ರೂ. ಮೊತ್ತದ ಹಣ ಪಡೆದಿದ್ದು, ಹಣ ಪಡೆದವರ ಸಂಪೂರ್ಣ ಖಾತೆ ತನ್ನ ಬಳಿ ಇದೆ ಎಂದು ಹ್ಯಾರಿಸ್ ಹೇಳಿದ್ದಾರೆ. ಜನರ ಮೇಲಿನ ನಂಬಿಕೆಯಿಂದ ಈ ರೀತಿ ಮಾಡಿದ್ದೇನೆ ಎಂದು ಹ್ಯಾರಿಸ್ ಹೇಳಿದ್ದಾರೆ ಮತ್ತು ತಾನು  ನಿರಾಳನಾಗಿರುವೆ ಎಮದಿದ್ದಾರೆ.  ಕೆಲವು ಆಪ್ತರು ನೀಡಿದ ಸಲಹೆಯನ್ನು ಅನುಸರಿಸಿ ಇಂತಹ ಬೋರ್ಡ್ ಹಾಕಲಾಗಿದೆ ಎಂದಿರುವರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries