HEALTH TIPS

ಪೆರಿಯ ಗೋಕುಲಂ ಗೋಶಾಲೆಗೆ ಭೇಟಿ ನೀಡಿದ ಜಾರ್ಖಂಡ್ ನೀರಾವರಿ ಸಚಿವ


       ಮುಳ್ಳೇರಿಯ: ಪೆರಿಯ ಆಲಕ್ಕೋಡಿನಲ್ಲಿರುವ ಗೋಕುಲಂ ಗೋಶಾಲೆಗೆ ಜಾರ್ಖಂಡ್ ನೀರಾವರಿ ಸಚಿವ ಮಿಥಿಲೇಶ್ ಕುಮಾರ್ ಠಾಕೂರ್, ಪತ್ನಿ ಚಂಚಲ್ ಠಾಕೂರ್, ಮಕ್ಕಳಾದ ಪ್ರತ್ಯಕ್ಷ ಠಾಕೂರ್ ಮತ್ತು ಪ್ರತ್ಯಾಶಾ ಠಾಕೂರ್ ಭೇಟಿ ನೀಡಿದರು. ಹೊಸವರ್ಷದ ಅಂಗವಾಗಿ ಗೋವುಗಳಿಗೆ ಬೆಲ್ಲ ಮತ್ತು ಹಣ್ಣುಗಳನ್ನು ನೀಡಿ ಸಂಭ್ರಮಿಸಿದರು.
        ಗೋಶಾಲೆಯ ಡಾ. ನಾಗರತ್ನ ಹೆಬ್ಬಾರ್ ದೇಶಿ ಗೋವುಗಳ ಗುಣಗಳನ್ನು ವಿವರಿಸಿದರು. ಪಂಚಗವ್ಯ ಉತ್ಪನ್ನಗಳ ಬಗ್ಗೆ ತಿಳಿದುಕೊಂಡ ಅವರು ಉತ್ಪನ್ನಗಳನ್ನು ಖರೀದಿಸಿದರು. ಸಚಿವರು ಮಾತನಾಡಿ, ಗೋಶಾಲೆಯ ಮೆಚ್ಚುಗೆಯ ಮಾತುಗಳನ್ನಾಡಿ, ನಿರಂತರವಾಗಿ ನಡೆಯುತ್ತಿರುವ ಸಂಗೀತೋತ್ಸವಕ್ಕೆ ಮತ್ತೆ ಬರುವುದಾಗಿ ತಿಳಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries