HEALTH TIPS

ತೀರ್ಪಿಗೆ ಕಾಯುತ್ತಿರುವ 7,89,623 ಕಡತಗಳು: ಮುಖ್ಯಮಂತ್ರಿಗಳ ಇಲಾಖೆಯಲ್ಲಿವೆ ಅರ್ಧ ಲಕ್ಷ ಕಡತಗಳು


                ತಿರುವನಂತಪುರಂ; ಪ್ರತಿ ಕಡತಕ್ಕೂ ನ್ಯಾಯದೊರಕಿಸಲಾಗುವುದು ಎಂದು  ಘೋಷಿಸಿ ಅಧಿಕಾರಕ್ಕೆ ಬಂದ ಎಲ್.ಡಿ.ಎಫ್ ಸರ್ಕಾರದಲ್ಲಿ 700,000 ಕ್ಕೂ ಹೆಚ್ಚು ಕಡತಗಳು ಧೂಳು ಹಿಡಿಯುತ್ತಿರುವುದು ಪತ್ತೆಯಾಗಿದೆ.
             ನಿಖರವಾಗಿ ಹೇಳಬೇಕೆಂದರೆ 7,89,623 ಕಡತಗಳು ಧೂಳು ಹಿಡಿದಿದೆ. ಮುಖ್ಯಮಂತ್ರಿಗಳ ಗೃಹ ಇಲಾಖೆಯಲ್ಲಿಯೇ 44,437 ಕಡತಗಳು ಬಾಕಿ ಉಳಿದಿವೆ.
           ಹೆಚ್ಚಿನ ಕಡತಗಳು ಮುಖ್ಯಮಂತ್ರಿ ಮತ್ತು ಸಚಿವರಾದ ವಿ ಶಿವನ್‍ಕುಟ್ಟಿ, ಎಕೆ ಶಶೀಂದ್ರನ್ ಮತ್ತು ಎಂ.ಬಿ.ರಾಜೇಶ್ ಅವರ ಇಲಾಖೆಗಳಲ್ಲಿವೆ. ಇವುಗಳಲ್ಲಿ ಹೆಚ್ಚಿನವು ರಾಜೇಶ್ ಅವರ ಸ್ಥಳೀಯಾಡಳಿತ ಇಲಾಖೆಯಲ್ಲಿವೆ. ಇಲ್ಲಿ 2,51,769 ಕಡತಗಳು ಬಾಕಿ ಇವೆ.
            ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ನೀಡಿರುವ ಅಂಕಿ ಅಂಶಗಳ ಪ್ರಕಾರ ಸೆಕ್ರೆಟರಿಯೇಟ್ ಒಂದರಲ್ಲೇ 93014 ಕಡತಗಳು ಬಾಕಿ ಇವೆ. ಅರಣ್ಯ ಇಲಾಖೆಯಲ್ಲಿ 1,73,478 ಹಾಗೂ ಶಿಕ್ಷಣ ಇಲಾಖೆಯಲ್ಲಿ 41,007 ಕಡತಗಳಿವೆ. ಕಂದಾಯ ಇಲಾಖೆಯಲ್ಲಿ 38,888, ಆಹಾರ ಇಲಾಖೆಯಲ್ಲಿ 34,796 ಹಾಗೂ ಆರೋಗ್ಯ ಇಲಾಖೆಯಲ್ಲಿ 20,205 ಕಡತಗಳು ಬಾಕಿ ಉಳಿದಿವೆ.
           ಸರ್ಕಾರಿ ಕಚೇರಿಗಳಲ್ಲಿ ಕಟ್ಟಿರುವ ಕಡತಗಳನ್ನು ಇತ್ಯರ್ಥಪಡಿಸಲು ಮುಖ್ಯಮಂತ್ರಿಗಳು ಘೋಷಿಸಿದ ಪ್ರಚಾರ ಕಾರ್ಯಕ್ರಮಗಳ ವೈಫಲ್ಯವನ್ನು ಖುದ್ದು ಮುಖ್ಯಮಂತ್ರಿಗಳೇ ನಿನ್ನೆ ಸದನದಲ್ಲಿ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿರುವುದು ಕಂಡುಬಂತು. ಸಚಿವರ ನೀತಿ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಹಾಗೂ ಉನ್ನತ ಅಧಿಕಾರಿಗಳ ಅಸಹಕಾರದಿಂದ ಸಚಿವಾಲಯದಲ್ಲಿ ಕಡತ ತೆರವು ವಿಳಂಬವಾಗಿದೆ ಎನ್ನುತ್ತಾರೆ ಸಿಬ್ಬಂದಿ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries