HEALTH TIPS

ಮಗು ಸತ್ತೇ ಹೋಯ್ತು ಅಂತ ಅಳುತ್ತಿದ್ದವರಿಗೆ ಕಾದಿತ್ತು ಅಚ್ಚರಿ! ಪೊಲೀಸ್ ಪವಾಡದಿಂದ ಮಗುವಿಗೆ ಸಿಕ್ತು ಮರುಜನ್ಮ

 

            ಕಣ್ಣೂರು: ಮಗು ಸತ್ತೇ ಹೋಗಿದೆ ಅಂದುಕೊಂಡಿದ್ದರು. ಆದರೆ ಪೊಲೀಸ್​ ಅಧಿಕಾರಿಯೊಬ್ಬರು ಕೊನೇ ಕ್ಷಣದಲ್ಲಿ ಸಿಪಿಆರ್​ ಮಾಡುವ ಮೂಲಕ 9 ತಿಂಗಳ ಮಗುವಿನ ಮರುಜನ್ಮ ನೀಡಿದ್ದಾರೆ.

             ಮುಹಮ್ಮದ್​ ಫಾಜಿಲ್​ ಅವರು ಕೊಲಚೇರಿಯ ಪಟ್ಟಾಯಂನಲ್ಲಿ ಹೊಸ ಪಾಸ್​ಪೋರ್ಟ್ಸ್​ ಪರಿಶೀಲನೆ ನಡೆಸುತ್ತಿದ್ದು.

                 ಈ ವೇಳೆ ಮನೆಯೊಂದರಿಂದ ಜೋರಾಗಿ ಅಳುವ ಶಬ್ದ ಕೇಳಿಸಿತು. ತಕ್ಷಣ ಫಾಜಿಲ್​ ಅಲ್ಲಿಗೆ ಹೋದರು. ಆ ಕ್ಷಣದಲ್ಲಿ 9 ತಿಂಗಳು ಮಗು ಪ್ರಜ್ಞೆಯಿಲ್ಲದೆ ಬಿದ್ದಿತ್ತು. ಕುಟುಂಬಸ್ಥರು ಮತ್ತು ಪಾಲಕರು ಮಗು ಸತ್ತಿದೆ ಎಂದು ಭಾವಿಸಿ ಅಳುತ್ತಿದ್ದರು.

                  ಎಲ್ಲರು ಅಳುತ್ತಿರುವಾಗ ಪೊಲೀಸ್​ ಅಧಿಕಾರಿ ಫಾಜಿಲ್​ ಒಂದು ಪ್ರಯತ್ನ ಮಾಡೇ ಬಿಡೋಣ ಅಂತಾ ಮಗುವಿಗೆ ಸಿಪಿಆರ್​ ಮಾಡಿದರು. ಪವಾಡ ಎಂಬಂತೆ ಮಗು ಸಿಪಿಆರ್​​ಗೆ ಸ್ಪಂದಿಸಿ, ಮತ್ತೆ ಉಸಿರಾಡಲು ಆರಂಭಿಸಿತು. ಈ ವೇಳೆ ಅಳುತ್ತಿದ್ದವರಲ್ಲ ತಕ್ಷಣ ಅಳು ನಿಲ್ಲಿಸಿ ಮಗುವನ್ನು ನೋಡಲು ಧಾವಿಸಿದರು.

                 ಸಿಪಿಆರ್​ ಬಳಿಕ ಮಗುವನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಮಗು ಚೇತರಿಸಿಕೊಳ್ಳುತ್ತಿದೆ. ಸಮಯ ಪ್ರಜ್ಞೆ ಮೆರೆದ ಫಾಜಿಲ್​ಗೆ ಪೊಲೀಸ್​ ಇಲಾಖೆ ಸೇರಿದಂತೆ ಕೇರಳದ ಜನರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries