ಕುಂಬಳೆ: ನಷ್ಟದಲ್ಲಿ ಓಲಾಡುತ್ತಿರುವ ಕೆ.ಎಸ್.ಆರ್.ಟಿ.ಸಿಯನ್ನು ರಕ್ಷಿಸಲು ಕೊನೆಯ ಆಶ್ರಯವಾಗಿ ಕಳೆದ ತಿಂಗಳಿಂದ ಮಧ್ಯ ಕೇರಳದ ಹಲವೆಡೆ ಕರ್ನಾಟಕದಿಂದ ಇಂಧನ ತುಂಬಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಇದೀಗ ಕಾಸರಗೋಡು ಡಿಪೆÇ್ಪೀದಿಂದ ನಿಂದ ಮಂಗಳೂರಿಗೆ ಸರ್ವೀಸ್ ನಡೆಸುತ್ತಿರುವ ಬಸ್ಸುಗಳು ಬುಧವಾರದಿಂದ ಇಂಧನ ಕರ್ನಾಟಕದಿಂದ ತುಂಬಿಸತೊಡಗಿದೆ.
ಕೆ.ಎಸ್.ಆರ್.ಟಿ.ಸಿಯ ಓರ್ವ ಪ್ರತಿನಿಧಿಯ ಉಪಸ್ಥಿತಿಯಲ್ಲಿ ಪಂಬ್ ನಿಂದ ಡೀಸೆಲ್ ನೀಡಲಾಗುತ್ತಿದೆ. ಇಂಧನ ತುಂಬುವ ಸಂದರ್ಭ ಬಸ್ ನೌಕರರೂ ಜೊತೆಯಲ್ಲಿರಬೇಕು ಎಂದು ಸೂಚನೆ ನೀಡಲಾಗಿದೆ.
ಕಾಸರಗೋಡು- ಮಂಗಳೂರು ಸೇವೆಗೆ ದಿನನಿತ್ಯ 2860 ಲೀಟರ್ ಡೀಸಲ್ ಬೇಕಾಗುತ್ತಿದೆ. ಅಂದರೆ ಸರಾಸರಿ ದಿನವೊಂದಕ್ಕೆ 24,000 ರೂ. ಕೆ.ಎಸ್.ಆರ್.ಟಿ.ಸಿಗೆ ಲಾಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮಂಗಳೂರು, ಕೊಲ್ಲೂರು, ಸುಳ್ಯ ವಲಯಗಳಿಗೆ ಸೇವೆ ನಡೆಸುವ ದೀರ್ಘ ದೂರದ ಬಸ್ಸುಗಳು ಕರ್ನಾಟಕದಲ್ಲಿ ಇಂಧನ ತುಂಬಿದರೆ ಒಂದು ದಿನ 50,000 ರೂಪಾಯಿ ಲಾಭ ಪಡೆಯಬಹುದು. ಪ್ರಸ್ತುತ 8 ರೂಪಾಯಿಗಳಷ್ಟು ವ್ಯತ್ಯಾಸವು ಡೀಸಲ್ ಬೆಲೆಯಲ್ಲಿ ಕೇರಳ ಮತ್ತು ಕರ್ನಾಟಕದಲ್ಲಿದೆ. 26 ಬಸ್ಸುಗಳು ಬುಧವಾರದಿಂದ ಮಂಗಳೂರಿನ ಪಂಪ್ ನಿಂದ ಇಂಧನ ತುಂಬಿಸತೊಡಗಿದೆ. ಈ ಬಸ್ಸುಗಳು 124 ಚೈನ್ ಸೇವೆಗಳನ್ನು ಪ್ರತಿನಿತ್ಯ ನಡೆಸುವುದು. ಕರ್ನಾಟಕದಲ್ಲಿ ಡೀಸೆಲ್ ಬೆಲೆಯ ಅಗ್ಗದ ಕಾರಣ ಕೇರಳದ ಬಸ್ಸುಗಳಿಗೆ ಅಲ್ಲಿಂದಲೇ ಡೀಸೆಲ್ ತುಂಬಲು ನಿರ್ಧರಿಸಲಾಗಿದೆ.
ಕಂಪ್ಯೂಟರೀಕೃತ ಬಿಲ್ಲುಗಳು ಲಭ್ಯವಿರುವ ಪಂಪ್ ಗಳಿಂದ ಮಾತ್ರ ಭಾರತೀಯ ಓಯಿಲ್ ಕಾರ್ಪರೇಶನ್ನ ಫ್ಲೀಟ್ ಕಾರ್ಡುಗಳೊಂದಿಗೆ ಇಂಧನವನ್ನು ಪೂರೈಸಬೇಕು ಎಂದು ಸೂಚಿಸಲಾಗಿದೆ. ಮಂಗಳೂರು ಇಂಡಿಯಾನ ಆಸ್ಪತ್ರೆ ಬಳಿಯಿರುವ ಇಂಡಿಯನ್ಯಿಲ್ ಕಾರ್ಪೋರೇಶನ್ ಪಂಪ್ ನಿಂದ ಇಂಧನ ತುಂಬಿಸಲು ನಿರ್ದೇಶಿಸಲಾಗಿದೆ. ಕಾಸರಗೋಡು ಡಿಪೆÇ್ಪೀದಿಂದ ಸುಳ್ಯ, ಪುತ್ತೂರು ಸೇವೆ ನಡೆಸುವ ಬಸ್ಸುಗಳಿಗೆ ಈಗ ತಾತ್ಕಾಲಿಕವಾಗಿ ಈ ವ್ಯವಸ್ಥೆಯಡಿ ಇಂಧನ ತುಂಬಿಸಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ರೂಟಲ್ಲೂ ವ್ಯವಸ್ಥೆ ಕಲ್ಪಿಸಲಾಗುವುದೆಂದು ಅಧಿಕೃತರು ತಿಳಿಸಿದ್ದಾರೆ. ವಯನಾಡಿನ ಮಾನಂತವಾಡಿ ಮೂಲಕ ಹಾದುಹೋಗುವ ಬೆಂಗಳೂರು ಬಸ್ಸುಗಳು ಪ್ರತ್ಯೇಕ ಪ್ಯುಯಲ್ ಕಾರ್ಡಿನೊಂದಿಗೆ ಇಂಧನವನ್ನು ತುಂಬಿದಾಗ ತಿಂಗಳಿಗೆ 3 ಲಕ್ಷದಷ್ಟು ರೂಪಾಯಿ ಲಾಭದಾಯಕವಾಗಲಿದೆ. ್ತ
ಕಾಸರಗೋಡು-ಮಂಗಳೂರು ರೂಟಿನ ಕೆ.ಎಸ್.ಆರ್.ಟಿ.ಸಿಗೆ ಮಂಗಳೂರು ಪಂಪ್ ನಿಂದ ಇಂಧನ: ಲಾಭ ಏಳು ಲಕ್ಷದಷ್ಟು ನಿರೀಕ್ಷೆ
0
February 02, 2023
Tags