HEALTH TIPS

ಸೋಮವಾರ ಒಳ್ಳೆಯ ದಿನ: ಅಡ್ವ. ಜಯ ಶಂಕರ್ ವ್ಯಂಗ್ಯ


                ತಿರುವನಂತಪುರ: ಮುಖ್ಯಮಂತ್ರಿಗಳ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿ.ಎಂ. ರವೀಂದ್ರನ್ ಅವರನ್ನು ವಿಚಾರಣೆಗೆ ಕರೆಸಿದಾಗ ಸೋಮವಾರ ಒಳ್ಳೆಯ ದಿನವಾಗಿತ್ತು ಎಂದು ಅಡ್ವ. ಜಯ ಶಂಕರ್ ಕಟಕಿಯಾಡಿದ್ದಾರೆ. ಸೋಮವಾರ ಒಳ್ಳೆಯ ದಿನ ಎಂದು ಚಿತ್ರ ನಿರ್ದೇಶಕ ಪದ್ಮರಾಜನ್ ಹೇಳುತ್ತಿದ್ದರು ಎಂದು ಅಡ್ವ.ಜಯಶಂಕರ್ ವ್ಯಂಗ್ಯದ ಧಾಟಿಯಲ್ಲಿ ಹೇಳಿರುವರು.
           ಅಡ್ವ.ಜಯಶಂಕರ್ ಅವರು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಸಿಪಿಎಂ ವಿರುದ್ಧ ಅಪಹಾಸ್ಯದಿಂದ ಕೂಡಿದ ವಿಡಿಯೋದಲ್ಲಿ ಇದನ್ನು ವಿವರಿಸಿದ್ದಾರೆ. ಒಂದೆಡೆ ಗೋವಿಂದನ್ ಮಾಸ್ತರ್ ಮತ್ತು ಸ್ವರಾಜ್ ಕೇರಳದ ಸರ್ಕಾರದ ಸಾಧನೆಗಳನ್ನು ಜನರಿಗೆ ವಿವರಿಸುತ್ತಿದ್ದರೆ, ಇನ್ನೊಂದೆಡೆ ಇಡಿ ಸಿ.ಎಂ. ರವೀಂದ್ರನ್ ಅವರನ್ನು ಬೆಂಡೆತ್ತಿರುವುದು ಅದ್ಬುತವಾದ ಸನ್ನಿವೇಶ ಎಂದು ಜಯಶಂಕರ್ ಹೇಳಿದ್ದಾರೆ.
            ಅದೇನೇ ಇರಲಿ, ಸೋಮವಾರ ಯಾರಿಗೆ ಒಳ್ಳೆ ದಿನ ಬರುತ್ತದೋ ಕಾದು ನೋಡಬೇಕು ಎನ್ನುತ್ತಾರೆ ಜಯಶಂಕರ್. ದಾರಿಯಲ್ಲಿ ಏಣಿ ಹಿಡಿದ ಶಿವಶಂಕರ್ ಅವರನ್ನು ನಾವು ಮೆಚ್ಚದೇ ಇರಲಾರೆವು. ವೈಫ್ ಮಿಷನ್ ಪ್ರಕರಣ ತಣ್ಣಗಾಗುತ್ತಿರುವಾಗಲೇ ಅಶ್ವತ್ಥಾಮವೇ ವೇರುಮುರು ಎಂಬ ಪುಸ್ತಕ ಬರೆದರು. ಕೋಪೆÇೀದ್ರಿಕ್ತ ಸ್ವಪ್ನಾ ಸುರೇಶ್ ಅವರು ಚಾಟಿಯಿಂದ ಪದ್ಮವ್ಯೂಹಮ್ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿ ಕುಟುಂಬಕ್ಕೆ ಸಿಕ್ಕ ಲಾಭದ ಬಗ್ಗೆ ಸ್ವಪ್ನಾ ಸುರೇಶ್ ಜನರಿಗೆ ಅರಿವು ಮೂಡಿಸಿದರು. ಈ ರೀತಿಯ ಪುಸ್ತಕ ಬರೆಯದಿದ್ದರೆ ಏನೂ ಆಗುತ್ತಿರಲಿಲ್ಲ. ಬಜೆಟ್ ಅನ್ನು ಜನ ಮುಕ್ತಕಂಠದಿಂದ ಸ್ವೀಕರಿಸಿದರು. ಅದಕ್ಕಾಗಿಯೇ ಕಾಮ್ರೇಡ್ ಪಿಣರಾಯಿ ಅವರು ಸೆಸ್ ಅನ್ನು 50 ಪೈಸೆ ಕೂಡ ಕಡಿಮೆ ಮಾಡುವುದಿಲ್ಲ ಎಂದು ಹೇಳುತ್ತಾರೆ. ಏಕೆಂದರೆ ಕೇರಳದ ಜನರು ಬಜೆಟ್ ಅನ್ನು ಆನಂದಿಸುತ್ತಿದ್ದಾರೆ ಎಂದು ಜಯಶಂಕರ್ ವಿಡಂಬನೆಯ ಮೂಲಕ ಸುಳಿವು ನೀಡಿದ್ದಾರೆ.
          ಈ ಹಿಂದೆ 2011ರಲ್ಲಿ ಉಮ್ಮನ್ ಚಾಂಡಿ ನೇತೃತ್ವದಲ್ಲಿ ಜನಮೋಚನ ಯಾತ್ರೆ ಎಂಬ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಪಯಣ ತ್ರಿಶೂರ್ ತಲುಪಿದಾಗ ಕುನ್ಹಾಲಿಕುಟ್ಟಿಯವರ ಐಸ್ ಕ್ರೀಂ ಪಾರ್ಲರ್ ಕೇಸ್ ಮತ್ತು ಕೊಟ್ಟಾರಕ್ಕರ ತಲುಪಿದಾಗ ಬಾಲಕೃಷ್ಣ ಪಿಳ್ಳೈ ಪ್ರಕರಣಗಳು ಬಂದವು. ಮುಂದಿನ ಚುನಾವಣೆಯಲ್ಲಿ ಯುಡಿಎಫ್‍ಗೆ ದೊಡ್ಡ ಹೊಡೆತ ಇದಾಯಿತು. ವಾಸ್ತವವಾಗಿ, ಯಾತ್ರೆಗಳನ್ನು ಪ್ರಾರಂಭಿಸುವ ಮೊದಲು ಜ್ಯೋತಿಷಿಗಳನ್ನು ಸಂಪರ್ಕಿಸಬೇಕು. ಆದರೆ ಗೋವಿಂದನ್ ಮಾಸ್ತರ್ ಅವರು ಭೌತವಾದಿಯಾಗಿರುವುದರಿಂದ ಜ್ಯೋತಿಷಿÀಳನ್ನು ನಂಬದೇ ಇರಬಹುದು. ಇದೀಗ ಕಾಸರಗೋಡಿನಿಂದ ಆರಂಭಗೊಂಡಿರುವ ಗೋವಿಂದನ್ ಮಾಸ್ತರ್ ಅವರ ಯಾತ್ರೆಯೂ ಹಾಗೆಯೇ ಎಂದು ಅಡ್ವ. ಜಯಶಂಕರ್ ಹೇಳುತ್ತಾರೆ.
         ಇವೆಲ್ಲದರ ಸುಳಿವು ಏನೆಂಬುದು ಓದುಗರಲಿ ಕೆಲವರಿಗೆ ಹೊಳೆದಿರಬಹುದು. ಆದರೆ ಹೊಳೆಯದವರೇ ಬಹುಮಂದಿ ಎಂಬುದು ದೇವರ ಸ್ವಂತ ನಾಡಾದ ಕೇರಳದ ನಿತ್ಯ ಘಟನೆಗಳ ಸಾಕ್ಷಿ ಎನ್ನಲಾಗುತ್ತಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries