ಮಂಜೇಶ್ವರ : ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ಕಲಾಸಂಸ್ಥೆ ಮಾರ್ಚ್ 12ರಂದು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಬಡಗುತಿಟ್ಟಿನ ಸುಪ್ರಸಿದ್ಧ ಮೇಳವಾದ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮೇಳದವರ ಯಕ್ಷಗಾನ ಬಯಲಾಟ “ಪಾವನ ತುಳಸಿ” ಆಯೋಜಿಸಿದ್ದು, ಆ ಬಗೆಗಿಗಿನ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತಭಟ್ ತೊಟ್ಟೆತ್ತೋಡಿ ಬಿಡುಗಡೆಗೊಳಿಸಿದರು.
ಗುರುನರಸಿಂಹ ಯಕ್ಷಬಳಗದ ಅಧ್ಯಕ್ಷ ವೇದಮೂರ್ತಿ ಗಣೇಶ ನಾವಡ ಮೀಯಪದವು ಹಾಗೂ ಸದಸ್ಯರು ಮತ್ತು ಕಲಾ ಪ್ರೇಮಿಗಳು ಉಪಸ್ಥಿತರಿದ್ದರು.
ಚಿಗುರುಪಾದೆಯಲ್ಲಿ ಪೆರ್ಡೂರು ಮೇಳದ ಬಯಲಾಟ: ಆಮಂತ್ರಣ ಪತ್ರಿಕೆ ಬಿಡುಗಡೆ
0
February 22, 2023
Tags