HEALTH TIPS

ಕೊನೆಗೂ ನ್ಯೂಸ್ ರೀಡ್ ಇನ್ 24*7 ನಲ್ಲಿ ಕಾಣಿಸಿಕೊಂಡ ಸುಜಯ ಪಾರ್ವತಿ: ಕೇರಳದ ಮಾಧ್ಯಮ ಇತಿಹಾಸದಲ್ಲಿ ಮೊದಲು


            ಕೊಚ್ಚಿ: ಟ್ವೆಂಟಿ ಪೋರ್ ಚಾನೆಲ್ ಶುರುವಾದಾಗಿನಿಂದ ಸಿಪಿಎಂನ ಮುಖವಾಣಿಯಂತೆ ಗುರುತಿಸಿಕೊಮಡಿದ್ದ ಚಾನೆಲ್ ಎಂದು ನಿಮ್ಮಲ್ಲಿ ಕೆಲವರಾದರೂ ಹೇಳಿರಬಹುದು.
            ಇವತ್ತು ಇದೇನಾ? 24 * 7 ಚಾನೆಲ್ ಇಂದು ನರೇಂದ್ರ ಮೋದಿಯವರ ಭಾಷಣವನ್ನು ಲೈವ್ ಆಗಿ ತೋರಿಸುತ್ತಿಲ್ಲವೇ? ಮಹಿಳೆ ಬದಲಾವಣೆ ತರಬಲ್ಲಳು. ನಿಲುವು ತಳೆಯುವ ಶಕ್ತಿ ಇರಬೇಕು. ನಾವು ಇತರರನ್ನು ಆ ಸ್ಥಾನಕ್ಕೆ ತರಲು ಶಕ್ತರಾಗಿರಬೇಕು. ಕೆಲಸದ ಸ್ಥಳದಲ್ಲಾಗಲಿ, ಸಮಾಜದಲ್ಲಾಗಲಿ ಬದಲಾವಣೆ ತರಬೇಕಾದವರು ನಾವೇ. ಆದರೆ ನಾವು ತೆರಬೇಕಾದ ಬೆಲೆ ದೊಡ್ಡದಾಗಿರುತ್ತದೆ'
           ಅಂತರಾಷ್ಟ್ರೀಯ ಮಹಿಳಾ ದಿನದಂದು ಬಿಎಂಎಸ್ ವೇದಿಕೆಯಲ್ಲಿ ಭಾಷಣ ಮಾಡಿದ್ದಕ್ಕಾಗಿ 24 ನ್ಯೂಸ್‍ನ ಸುದ್ದಿ ಸಂಪಾದಕಿÀ ಸುಜಯ ಪಾರ್ವತಿ ಅವರನ್ನು ಅಮಾನತುಗೊಳಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಆಡಳಿತವನ್ನು ಶ್ಲಾಘಿಸಿದ್ದಕ್ಕೆ ಅವರಿಗೊದಗಿದ ಉಡುಗೊರೆಯದು. ಟ್ರೇಡ್ ಯೂನಿಯನ್ ಆಗಿ ಸಿಐಟಿಯುಗಿಂತ ಬಿಎಂಎಸ್ ಉತ್ತಮ ಸಂಘಟನೆಯಾಗಿದೆ ಎಂದು ಹೇಳಿದ್ದು ಅವರೆಸಗಿದ ತಪ್ಪಾಗಿತ್ತು.
            ಅಮಾನತು ಷೋಕಾಸ್ ನೋಟಿಸ್‍ಗೆ ಪ್ರತಿಕ್ರಿಯಿಸಿದ ಸುಜಯ ಅವರು ಯಾವುದೇ ವಿಷಯದ ಬಗ್ಗೆ ತಮ್ಮ ನಿಲುವು ಬದಲಿಸುವುದಿಲ್ಲ ಎಂದು ದೃಢವಾದ ನಿಲುವನ್ನು ತೆಗೆದುಕೊಂಡರು.
            ಬಿಎಂಎಸ್ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆದ ನಂತರ ಚಾನೆಲ್ 24 ಅನ್ನು ಕಡಿತಗೊಳಿಸಲಾಯಿತು. ಕೆಲ ಚಾನೆಲ್ ಮೇಲಧಿಕಾರಿಗಳು ಸುಜಯಾ ಅವರನ್ನು ಸುಳ್ಳು ಕಥೆ ಕಟ್ಟಿ ಅವರನ್ನು ಕೆಟ್ಟವರನ್ನಾಗಿ ಮಾಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಅದನ್ನು ಉದ್ಯೋಗಕ್ಕೆ ಹಿಂಪಡೆಯಲು ನಿರ್ಧರಿಸಿದೆ. ಕಾರ್ಮಿಕ ಸಂಘಟನೆಯ ಒತ್ತಡದಿಂದಾಗಿ ವಜಾಗೊಂಡ ವ್ಯಕ್ತಿಯನ್ನು ಮರುಸೇರ್ಪಡೆಸಿರುವುದು ಕೇರಳದ ಮಾಧ್ಯಮ ಇತಿಹಾಸದಲ್ಲಿ ಇದೇ ಮೊದಲು.

                ಇಂದು ಮಧ್ಯಾಹ್ನ 2.30ರ ಸುದ್ದಿ ಓದುವ ಮೂಲಕ ಸುಜಯ ಮತ್ತೆ 24 ನ್ಯೂಸ್‍ನ ಮುಖವಾಗಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries