HEALTH TIPS

ಮುಕ್ತಕಗಳ 2 ಕೃತಿಗಳ ಲೋಕಾರ್ಪಣೆ: ಬಳಕೆಯಿಂದ ಭಾಷೆ ಬೆಳೆಯುತ್ತದೆ- ಡಾ. ವಿಷ್ಣು ಭಟ್


          ಕುಂಬಳೆ: 'ಮುಕ್ತಕಗಳು ಮುತ್ತಿನ ಹಾಗೆ. ಅವುಗಳು ಸ್ವತಂತ್ರ್ಯವಾಗಿದ್ದು, ಕೃತಿಯೆಂಬ ದಾರದಿಂದ ಪೋಣಿಸಿದಾಗ ಇನ್ನಷ್ಟೂ ಸುಂದರವಾಗಿ ಕಾಣುತ್ತದೆ. ಈ ಪ್ರಾಚೀನ ಸಾಹಿತ್ಯ ಪ್ರಕಾರವು ಒಂದೇ ಪದ್ಯ ಎಂಬಂತೆ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಅಡಕವಾಗಿದೆ. ಭಾಷೆಗಳು ಬೆಳೆಯಬೇಕಾದರೆ ಅವುಗಳ ಬಳಕೆಯಾಗಬೇಕು. ಬಹುಭಾಷೆಗಳು ರಾಷ್ಟ್ರದ ಶಕ್ತಿಯಾಗಿದ್ದು, ಎಲ್ಲಾ ಭಾಷೆಗಳ ರಕ್ಷಣೆಯು ಎಲ್ಲಾ ಭಾಷೆಗಳ ಜವಾಬ್ದಾರಿ', ಎಂದು ಹಿರಿಯ ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್ ಹೇಳಿದರು.
          ಅವರು ಭಾನುವಾರ ಕುಂಬಳೆ ಸಮೀಪದ ನಾರಾಯಣ ಮಂಗಲದ 'ಶ್ರೀನಿಧಿ'ಯಲ್ಲಿ ಸಿರಿಗನ್ನಡ ಕಾಸರಗೋಡು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಬೆಂಗಳೂರಿನ ಸಿರಿಗನ್ನಡ ಕೇಂದ್ರ ಸಮಿತಿಯ  ವಿಂಶತ್ಯುತ್ಸವ, ಎರಡು ಮುಕ್ತಕ ಕೃತಿಗಳ ಬಿಡುಗಡೆ, ಗಮಕ ವಾಚನ ಹಾಗೂ ವಸಂತ ಕಾವ್ಯೋತ್ಸವ-2023 ಕಾರ್ಯಕ್ರಮದಲ್ಲಿ ಮಾತನಾಡಿದರು.
          ಈ ಸಂದರ್ಭದಲ್ಲಿ ಟಿ ಕೆ ವಿ ಭಟ್ ಅವರು ಬರೆದ 'ಮುಕ್ತಕ ಸುಮ' ಕೃತಿಯನ್ನು ಡಾ. ಪಾದೆಕಲ್ಲು ವಿಷ್ಣು ಭಟ್  ಹಾಗೂ ಮಂಜೇಶ್ವರದ ಲಕ್ಷ್ಮೀ ವಿ ಭಟ್ ಅವರು ಬರೆದ 'ಜನಮಾನ್ಯ ಮುಕ್ತಕಗಳು' ಕೃತಿಯನ್ನು ವಿ. ಬಿ ಕುಳಮರ್ವ ಅವರು ಬಿಡುಗಡೆ ಮಾಡಿದರು. ಲಲಿತಾಲಕ್ಷ್ಮಿ ಕುಳಮರ್ವ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಣ ತಜ್ಞರಾದ ವಿ ಬಿ ಕುಳಮರ್ವ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತೆಕ್ಕೆಕೆರೆ ಶಂಕರನಾರಾಯಣ ಭಟ್, ವಾಮನ್ ರಾವ್ ಬೇಕಲ್, ರಾಧಾಕೃಷ್ಣ ಕೆ ಉಳಿಯತ್ತಡ್ಕ ಶುಭಾಶಂಸನೆ ಮಾಡಿದರು. ಸಭೆಯಲ್ಲಿ ವಿ ಬಿ ಕುಳಮರ್ವ ರಚಿಸಿದ ಕಾಸರಗೋಡಿನ ಸಿರಿಗನ್ನಡ ನಾಡಗೀತೆಯನ್ನು ಶ್ರದ್ಧಾ ನಾಯರ್‍ಪಳ್ಳ ಹಾಡಿದರು. ನಂತರ ಜೈಮಿನಿ ಭಾರತದಿಂದ ಆಯ್ದ ಕಾವ್ಯಭಾಗದ ಗಮಕ ವಾಚನ ಹಾಗೂ ವ್ಯಾಖ್ಯಾನ ನಡೆಯಿತು. ಶ್ರದ್ಧಾ ನಾಯರ್‍ಪಳ್ಳ ಅವರು ವಾಚನ ಹಾಗೂ ಪೆಲ್ತಾಜೆ ಶ್ರೀಹರಿ ಭಟ್ ವ್ಯಾಖ್ಯಾನ ನೀಡಿದರು.
         ನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಟಿ ಎ ಎನ್ ಖಂಡಿಗೆ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಕಾಸರಗೋಡು ಜಿಲ್ಲೆಯು ಹಿರಿಯ ಮತ್ತು ಕಿರಿಯರಾದ ಸುಮಾರು 25 ಮಂದಿ ಕವಿಗಳು ಕವನವಾಚನ ಮಾಡಿದರು. ಗಣ್ಯರನ್ನು ಸಭೆಯಲ್ಲಿ ಶಾಲು ಹೊದೆಸಿ ಅಭಿನಂದಿಸಲಾಯಿತು. ಭಾಗವಹಿಸಿದ ಎಲ್ಲಾ ಕವಿಗಳಿಗೂ ಪುಸ್ತಕ ಸ್ಮರಣಿಕೆ ಹಾಗೂ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಲಾಯಿತು. ಅನೂಷಾ ಎಸ್ ಪ್ರಾರ್ಥನೆ ಹಾಡಿದರು. ವೆಂಕಟ್ ಭಟ್ ಎಡನೀರು ಸ್ವಾಗತಿಸಿದರು. ವಿ ಬಿ ಕುಳಮರ್ವ ವಂದಿಸಿದರು. ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಜಾದೂಗಾರ್ ಪೆರ್ಲ ಸಹಕರಿಸಿದ್ದರು.
            ಹೆಗ್ಗÀ್ಗಳಿಕೆ : ಬೆಂಗಳೂರಿನ ಸಿರಿಗನ್ನಡ ವೇದಿಕೆಯು ಅನೇಕ ಪ್ರದೇಶಗಳಲ್ಲಿ ಉಪಘಟಕಗಳನ್ನು ಹೊಂದಿದ್ದು, ಕಾಸರಗೋಡಿನ ಸಿರಿಗನ್ನಡ ಕೇರಳ ಗಡಿನಾಡ ಘಟಕವು ಮೊದಲಾಗಿ ಸಿರಿಗನ್ನಡ ವೇದಿಕೆಯ 20ನೇ ವರ್ಷಾಚರಣೆ(ವಿಂಶತ್ಯುತ್ಸವ} ಆಚರಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries