ಮದುವೆ ಎಂದರೆ ಏಳೇಳು ಜನ್ಮಗಳ ಬಂಧ ಎಂದು ಹೇಳಲಾಗುತ್ತದೆ. ಬಹುತೇಕರು ತಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಳ್ಳುತ್ತಾರೆ. ತಮ್ಮ ಸಂಗಾತಿಯೊಂದಿಗಿನ ಈ ಸಂಭ್ರಮದ ಕ್ಷಣವನ್ನು ಎಂದಿಗೂ ಮರೆಯಬಾರದು ಎಂದು ಹಲವು ಯೋಜನೆಗಳನ್ನು ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಲಕ್ಷಾಂತರ ವೆಚ್ಛವನ್ನೂ ಮಾಡುತ್ತಾರೆ. ಆದರೆ ಇತ್ತೀಚೆಗೆ ಹಲವು ವಿವಾಹಗಳು ಕ್ಷುಲ್ಲಕ ಕಾರಣಕ್ಕೆ ರದ್ದಾಗುತ್ತಿವೆ. ಕೆಲವು ವಿವಾಹಗಳು ವರನಿಗೆ ಬೋಳು ತಲೆ ಇದೆ, ಮದುಮಗನಿಗೆ ಇಂಗ್ಲಿಷ್ ಬರುವುದಿಲ್ಲ, ಕುಡಿಯುತ್ತಾನೆ, ಸರಿಯಾಗಿ ನಡೆದುಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ರದ್ದಾಗಿರುವ ಪ್ರಕರಣಗಳನ್ನು ನಾವು ನೋಡಿದ್ದೇವೆ.
ಮದುವೆ ಎಂದರೆ ಏಳೇಳು ಜನ್ಮಗಳ ಬಂಧ ಎಂದು ಹೇಳಲಾಗುತ್ತದೆ. ಬಹುತೇಕರು ತಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಳ್ಳುತ್ತಾರೆ. ತಮ್ಮ ಸಂಗಾತಿಯೊಂದಿಗಿನ ಈ ಸಂಭ್ರಮದ ಕ್ಷಣವನ್ನು ಎಂದಿಗೂ ಮರೆಯಬಾರದು ಎಂದು ಹಲವು ಯೋಜನೆಗಳನ್ನು ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಲಕ್ಷಾಂತರ ವೆಚ್ಛವನ್ನೂ ಮಾಡುತ್ತಾರೆ. ಆದರೆ ಇತ್ತೀಚೆಗೆ ಹಲವು ವಿವಾಹಗಳು ಕ್ಷುಲ್ಲಕ ಕಾರಣಕ್ಕೆ ರದ್ದಾಗುತ್ತಿವೆ. ಕೆಲವು ವಿವಾಹಗಳು ವರನಿಗೆ ಬೋಳು ತಲೆ ಇದೆ, ಮದುಮಗನಿಗೆ ಇಂಗ್ಲಿಷ್ ಬರುವುದಿಲ್ಲ, ಕುಡಿಯುತ್ತಾನೆ, ಸರಿಯಾಗಿ ನಡೆದುಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ರದ್ದಾಗಿರುವ ಪ್ರಕರಣಗಳನ್ನು ನಾವು ನೋಡಿದ್ದೇವೆ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಯುಪಿಯ ಕಾನ್ಪುರ ನಗರದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆಯ ನಂತರ ದಂಪತಿ ವಾರಣಾಸಿಯಿಂದ 700 ಕಿಮೀ ದೂರದ ವರನ ಊರಾದ ರಾಜಸ್ಥಾನದ ಸರ್ಸೋಲ್ಗೆ ಕಾರಿನಲ್ಲಿ ತೆರಳುತ್ತಿದ್ದರು. ಕಾರಿನಲ್ಲಿ 7 ಗಂಟೆ ಪ್ರಯಾಣಿಸಿದ ನಂತರ ವರ ಒಂದು ಸ್ಥಳದಲ್ಲಿ ಕಾರನ್ನು ನಿಲ್ಲಿಸಿದ್ದು, ಎಲ್ಲರೂ ಅಲ್ಲಿಯೇ ಉಪಹಾರ ಸೇವಿಸಲು ನಿರ್ಧರಿಸಿದ್ದಾರೆ.
ಈ ವೇಳೆ ತನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ನಂತರ ಪೊಲೀಸರು ಎಲ್ಲರನ್ನು ವಿಚಾರಣೆ ನಡೆಸಿದ್ದಾರೆ. ಮದುವೆ ದಾಖಲಾತಿ ಕೇಳಿದ್ದಕ್ಕೆ ವರ ರವಿ ನ್ಯಾಯಾಲಯದ ದಾಖಲೆಗಳನ್ನು ತೋರಿಸಿ ವೈಷ್ಣವಿಯನ್ನು ಮದುವೆಯಾಗಿದ್ದು, ತನ್ನ ಮನೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ.
ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ಗಂಡನ ಮನೆಯವರು ವಿವಾಹದ ಸಂದರ್ಭದಲ್ಲಿ ಅಲಹಾಬಾದ್ನಲ್ಲಿ ಇರುತ್ತೇವೆ ಎಂದಿದ್ದರು, ಇದೀಗ ರಾಜಸ್ತಾನದ ಬಿಕಾನೇರ್ಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಾನು ಮನೆಯಿಂದ ತುಂಬಾ ದೂರ ಹೋಗಲು ಬಯಸುವುದಿಲ್ಲ. ನಾನು ನನ್ನ ತಂದೆ ತಾಯಿಯ ಹತ್ತಿರ ಇರಲು ಬಯಸುತ್ತೇನೆ, ಈ ಮದುವೆಯನ್ನು ಮುರಿದುಕೊಳ್ಳುತ್ತೇನೆ ಎಂದು ವೈಷ್ಣವಿ ಹೇಳಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ಗಂಡನ ಮನೆಯವರು ವಿವಾಹದ ಸಂದರ್ಭದಲ್ಲಿ ಅಲಹಾಬಾದ್ನಲ್ಲಿ ಇರುತ್ತೇವೆ ಎಂದಿದ್ದರು, ಇದೀಗ ರಾಜಸ್ತಾನದ ಬಿಕಾನೇರ್ಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಾನು ಮನೆಯಿಂದ ತುಂಬಾ ದೂರ ಹೋಗಲು ಬಯಸುವುದಿಲ್ಲ. ನಾನು ನನ್ನ ತಂದೆ ತಾಯಿಯ ಹತ್ತಿರ ಇರಲು ಬಯಸುತ್ತೇನೆ, ಈ ಮದುವೆಯನ್ನು ಮುರಿದುಕೊಳ್ಳುತ್ತೇನೆ ಎಂದು ವೈಷ್ಣವಿ ಹೇಳಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ವಧುವಿನ ಸಂಪೂರ್ಣ ಕಥೆಯನ್ನು ಕೇಳಿದ ಪೊಲೀಸರು ಎಲ್ಲರನ್ನು ಮಹಾರಾಜಪುರ ಠಾಣಾಗೆ ಕರೆದುಕೊಂಡು ಹೋಗಿದ್ದಾರೆ. ನಂತರ ವಿವಾಹದ ಸಂದರ್ಭದಲ್ಲಿ ವರ ಬಿಕಾನೇರ್ ನಿವಾಸಿ ಎಂದು ಯುವತಿ ಮನೆಯವರಿಗೆ ತಿಳಿದಿತ್ತು ಎಂಬುದು ತಿಳಿದುಬಂದಿದೆ. ಇದಾದ ನಂತರ ಪೊಲೀಸರು ವಧುವಿನ ತಾಯಿಯೊಂದಿಗೆ ಚರ್ಚಿಸಿದ್ದಾರೆ.
ವಧುವಿನ ತಾಯಿ, " ನನಗೆ ಗಂಡನಿಲ್ಲ. ನಮ್ಮ ಸಂಬಂಧಿಕರೊಬ್ಬರು ಈ ಮದುವೆ ನಿಶ್ಚಯ ಮಾಡಿದ್ದರು. ಆ ಹುಡುಗ ಅಲಹಾಬಾದ್ನವನು ಎಂಬುದು ಮಾತ್ರ ನಮಗೆ ಗೊತ್ತಿತ್ತು. ನನ್ನ ಮಗಳು ಬಿಕಾನೇರ್ಗೆ ಹೋಗಲು ಬಯಸದಿದ್ದರೆ, ಅವಳನ್ನು ನನ್ನ ಮನೆಗೆ ಕಳುಹಿಸಿ. ನಾವು ಮದುವೆಯನ್ನು ಮುರಿದುಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
ವಧುವಿನ ತಾಯಿ, " ನನಗೆ ಗಂಡನಿಲ್ಲ. ನಮ್ಮ ಸಂಬಂಧಿಕರೊಬ್ಬರು ಈ ಮದುವೆ ನಿಶ್ಚಯ ಮಾಡಿದ್ದರು. ಆ ಹುಡುಗ ಅಲಹಾಬಾದ್ನವನು ಎಂಬುದು ಮಾತ್ರ ನಮಗೆ ಗೊತ್ತಿತ್ತು. ನನ್ನ ಮಗಳು ಬಿಕಾನೇರ್ಗೆ ಹೋಗಲು ಬಯಸದಿದ್ದರೆ, ಅವಳನ್ನು ನನ್ನ ಮನೆಗೆ ಕಳುಹಿಸಿ. ನಾವು ಮದುವೆಯನ್ನು ಮುರಿದುಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.