ಬದಿಯಡ್ಕ: ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲಾ ವಾರ್ಷಿಕೋತ್ಸವದ ಸಂzಭರ್Àದಲ್ಲಿ 72 ವರ್ಷಗಳ ಹಿಂದೆ ಶಾಲೆಯಲ್ಲಿ ಕಲಿತ ಊರಿನ ಹಿರಿಯ ಹಳೆವಿದ್ಯಾರ್ಥಿ ಸುಬ್ರಾಯ ನಾಯ್ಕ ಕುಂಟಿಕಾನ ಅವರನ್ನು ಹಳೆವಿದ್ಯಾರ್ಥಿಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಅವರು ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಜೋನ್ ಡಿಸೋಜ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಯಂ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಂಜಿತ್ ಕುಂಟಿಕಾನ ಶುಭಾಶಂಸನೆಗೈದರು. ನಿವೃತ್ತರಾಗಲಿರುವ ಅಧ್ಯಾಪಕ ಕೃಷ್ಣನ್ ನಂಬೂದಿರಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಖಾಲಿದ್ ಬಾಪಾಲಿಪೊನಂ, ಕಾರ್ಯದರ್ಶಿ ಉಮ್ಮರ್ ಪಾಡ್ಲಡ್ಕ, ಅಧ್ಯಾಪಕರುಗಳಾದ ಉಣ್ಣಿಕೃಷ್ಣನ್ ಟಿ.ಒ., ರಾಧಾಕೃಷ್ಣನ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ವೆಂಕಟ್ರಾಜ ಸ್ವಾಗತಿಸಿ, ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ, ಅಧ್ಯಾಪಕ ಅಬ್ದುಲ್ ಸಲಾಂ ವಂದಿಸಿದರು.
ಹಿರಿಯ ಹಳೆವಿದ್ಯಾರ್ಥಿಗೆ ಕುಂಟಿಕಾನ ಶಾಲೆಯಲ್ಲಿ ಸನ್ಮಾನ
0
March 06, 2023
Tags