ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ 14ನೇ ವಾರ್ಡ್ ಶೇಣಿಯ ಕುಟುಂಬಶ್ರೀ ಘಟಕಗಳ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಶೇಣಿ ಶ್ರೀಶಾರದಾಂಬಾ ಶಾಲಾ ಪರಿಸರದಲ್ಲಿ ಜರಗಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕುಟುಂಬಶ್ರೀ ಎಡಿಎಸ್ ಸಮಿತಿ ಅಧ್ಯಕ್ಷೆ ಪುಷ್ಪಾವತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂ.ಸದಸ್ಯ ಅನಿಲ್ ಕುಮಾರ್ ಕೆ.ಪಿ, ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಉಪಾಧ್ಯಕ್ಷೆ ಶಶಿಕಲಾ, ಮಾಜಿ ಪಂ.ಉಪಾಧ್ಯಕ್ಷೆ ಆಯಿμÁ ಎ.ಎ,ಮೊಹಮ್ಮದಾಲಿ ಪೆರ್ಲ, ಮೊಯ್ದಿನ್ ಕುಟ್ಟಿ ಶೇಣಿ, ಸಿಡಿಎಸ್, ಎಡಿಎಸ್ ಸದಸ್ಯೆಯರು ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಜಿ ಸಿಡಿಎಸ್ ಅಧ್ಯಕ್ಷೆ ಹೇಮಾವತೀ ಹಾಗೂ ಹಿರಿಯ ಕುಟುಂಬಶ್ರೀ ಸದಸ್ಯೆ ಚನಿಯಾರು ಪಾಯಿತ್ತಡ್ಕ ಅವರನ್ನು ಸನ್ಮಾನಿಸಲಾಯಿತು. ವಾರ್ಷಿಕೋತ್ಸವದಂಗವಾಗಿ ನಡೆದ ಆಟೋಟ ಸ್ಪರ್ಧಾ ವಿಜೇತರಿಗೆ ಪಂಚಾಯತಿ ಮಾಜಿ ಅಧ್ಯಕ್ಷೆ ಶಾರದ ವೈ ಬಹುಮಾನ ವಿತರಿಸಿದರು. ಮಾಜಿ ಸಿಡಿಎಸ್ ಸದಸ್ಯೆ ಯೋಗಿತಾ ವರದಿ ವಾಚಿಸಿದರು. ಪುಷ್ಪಾ ವಿ.ಸ್ವಾಗತಿಸಿ, ರೇಖಾ ಜ್ಯೋತಿ ವಂದಿಸಿದರು. ಮಂಜುಳಾ ನಿರೂಪಿಸಿದರು. ಬಳಿಕ ಕುಟುಂಬಶ್ರೀ ಸದಸ್ಯರು ಹಾಗೂ ಮಕ್ಕಳಿಂದ ಸಾಂಸ್ಕøತಿಕ ಪ್ರದರ್ಶನ ನಡೆಯಿತು.