HEALTH TIPS

ಕೆಂಗಲ್ಲ ಕಂಬಗಳಲ್ಲಿ ಪಡುವಲ-ಕುಂಬಳ: ಮುಳಿಯಾರಿನಲ್ಲಿ ಇಂತಹದೊಂದು ಕೃಷಿ ಖುಷಿ


                ಮುಳ್ಳೇರಿಯ: ಕೆಂಪು ಕಲ್ಲಿನಿಂದ ಮಾಡಿದ 64 ಕಂಬಗಳಿಗೆ ಸುತ್ತಿದ ತರಕಾರಿ ಬಳ್ಳಿಗಳು ಮನೋಹರ ಕಣ್ಮನ ತಣಿಸುವ ದೃಶ್ಯಗಳೊಂದಿಗೆ ಗಮನ ಸೆಳೆಯುತ್ತಿದೆ. ಸುಡು ಬಿಸಿಲಿನ ತಾಪದ ಪರಿಹಾರಕ್ಕಾಗಿ ಕಲ್ಲಕಂಬಗಳ ಮೇಲೆ ಇದೀಗ ಹಸಿರು ಹೊದಿಕೆ ಹೊದಿಸಿದೆ.
           ಕುಟುಂಬಶ್ರೀ ಜಿಲ್ಲಾ ಮಿಷನ್‍ನ ನೆರವಿನಿಂದ ಮೂಲಡ್ಕದಲ್ಲಿ ಮುಳಿಯಾರು ಪಂಚಾಯತಿ ಸಿಡಿಎಸ್ ಅಧ್ಯಕ್ಷೆ ಖೈರುನ್ನೀಸಾ ಅವರ ಮನೆ ಸಮೀಪದ ಎರಡು ಎಕರೆ ಜಮೀನಿನಲ್ಲಿ ತರಕಾರಿ ಬೆಳೆಯಲು ಈ ರೀತಿಯ ವಿಶಿಷ್ಟ ವ್ಯವಸ್ಥೆ ಮಾಡಲಾಗಿದೆ. ಜನವರಿ ತಿಂಗಳಲ್ಲಿ ಬೇಸಾಯ ಪ್ರಾರಂಭವಾಯಿತು. ಕೆಂಪು ಕಲ್ಲುಗಳನ್ನು ಖರೀದಿಸಿ ಕಂಬವನ್ನು ನಿರ್ಮಿಸಲಾಯಿತು. ಕಂಬವನ್ನು ನಿರ್ಮಿಸಲು 6 ಕಲ್ಲುಗಳನ್ನು ನೇರವಾಗಿ ಮತ್ತು ನೆಲದಲ್ಲಿ ಬುಡ ನಿರ್ಮಾಣಕ್ಕೆ 12 ಕಲ್ಲುಗಳನ್ನು ಬಳಸಲಾಗಿದೆ. ಸ್ತಂಭವು ಕೆಂಪು ಕಲ್ಲಿನಿಂದ ಮಾಡಲ್ಪಟ್ಟಿದೆ. ಆದ್ದರಿಂದ ಇದು ದೀರ್ಘಕಾಲದವರೆಗೆ ಇರುತ್ತದೆ. ಸಾಮಾನ್ಯವಾಗಿ ಪರಂಪರಾಗದ ಕ್ರಮವಾಗಿ ವಿವಿಧ ಮರಗಳ ಕಂಬಗಳನ್ನು ಬಳಸುವುದು ವಾಡಿಕೆ. ಆದರೆ ಇಲ್ಲಿ ಹೊಸ ಕ್ರಮ ಅನುಸರಿಸಲಾಗಿದೆ. ಪುನಃ ಬೇಸಾಯ ಮಾಡುವಾಗ ಇವುಗಳನ್ನು ಕೃಷಿಗೆ ಮರುಬಳಸಬಹುದು. ಮೇಲ್ಮಣ್ಣು ತುಂಬಿ ಗೊಬ್ಬರ, ಕೋಳಿ ಹಿಕ್ಕೆ, ಸುಣ್ಣ ಇತ್ಯಾದಿಗಳನ್ನು ಮೂಲ ಗೊಬ್ಬರವಾಗಿ ಬಳಸಲಾಯಿತು. ಬಿತ್ತನೆ ಮತ್ತು ಸಸಿಗಳನ್ನು ನೆಡುವ ಮೂಲಕ ಕೃಷಿ ಮಾಡಲಾಯಿತು.



          ಪಡುವಲ,ಕುಂಬಳಗಳ ಜೊತೆಗೆ ಗ್ರೋಬ್ಯಾಗ್ ಬಳಸಿ ಸಿಹಿಗುಂಬಳ, ಹಸಿಮೆಣಸು ಸಹಿತ ಇತರ ಅತಿ ಬೇಡಿಕೆಯ ತರಕಾರಿಗಳನ್ನು ಬೆಳೆಯಲಾಗುತ್ತದೆ. ದೂರದಿಂದ ತೋಟವನ್ನು ಗಮನಿಸಿದಾಗ ಇವು ಕಲ್ಲಕಂಬಗಳ ಆಸರೆಯಲ್ಲಿ ಬೆಳೆಯುತ್ತದೆ ಎಂದರೆ ಯಾರೂ ನಂಬುವುದಿಲ್ಲ. ಕೃಷಿಗೆ ಸಾವಯವ ಕೀಟನಾಶಕಗಳು ಮತ್ತು ಸಾವಯವ ಗೊಬ್ಬರಗಳನ್ನು ಬಳಸಲಾಗುತ್ತದೆ. ಕೃಷಿಗೆ ಅಗತ್ಯವಿರುವ ನೀರನ್ನು ಪೈಪ್ ಮೂಲಕ ಮನೆಯಲ್ಲಿರುವ ಕೊಳವೆ ಬಾವಿಯಿಂದ ಮತ್ತು ಹತ್ತಿರದ ಮನೆಯ ಬಾವಿಯಿಂದ ಸರಬರಾಜು ಮಾಡಲಾಗುತ್ತದೆ. ಖೈರುನ್ನೀಸಾ ಅವರ ಪತಿ ಮತ್ತು ಮಕ್ಕಳು ನಿರ್ವಹಣೆ ಮತ್ತು ಇತರ ಕೆಲಸಗಳಿಗೆ ಸಹಾಯ ಮಾಡುತ್ತಾರೆ. ಜೆ.ಎಲ್.ಜಿ ಗುಂಪು(ಜೋಯಿಂಟ್ ಲಯಾಬಲಿಟಿ ಗ್ರೂಪ್) ಸಹಯೋಗದೊಂದಿಗೆ ಇಲ್ಲಿ ತರಕಾರಿಗಳನ್ನು  ಬೆಳೆಯಲಾಗುತ್ತದೆ. ಅಲ್ಲದೆ ಮುಳಿಯಾರ್ ಕುಟುಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಮಧುರೈ ತುಳಸಿಯನ್ನು ಇಲ್ಲಿ ಬೆಳೆಸಲಾಯಿತು. ಪ್ರಾಯೋಗಿಕವಾಗಿ ಈ ರೀತಿಯ ಬೇಸಾಯವನ್ನು ಅಳವಡಿಸಿಕೊಳ್ಳಲಾಗಿದೆ ಆದರೆ ತರಕಾರಿ ಕೃಷಿ ಯಶಸ್ವಿಯಾದರೆ  ಇತರ ಪ್ರದೇಶಗಳಿಗೂ ಈ ವಿಧಾನವನ್ನು ವಿಸ್ತರಿಸಲಾಗುವುದು ಎಂದು ಕುಟುಂಬಶ್ರೀ ಜಿಲ್ಲಾ ಮಿಷನ್ ಎ.ಡಿ.ಎಂ.ಸಿ.  ಸಿ.ಎಚ್.ಇಕ್ಬಾಲ್ ಮಾಹಿತಿ ನೀಡಿದರು. ಹೆಚ್ಚಿನ ತರಕಾರಿಗಳೂ ಈಗಲೇ ಹಿಡುವಳಿ ಆರಂಭಿಸಿವೆ. 100 ಶೇ.ಯಶಸ್ಸಿನೊಂದಿಗೆ ಮೆಣಸಿನ ಫಸಲು ಸಿಗುವ ಭರವಸೆ ಇದೆ ಎನ್ನುತ್ತಾರೆ ಖೈರುನ್ನೀಸಾ.


                     ಅಭಿಮತ

              ಕುಟುಂಬಶ್ರೀ ಜೆಎಲ್ ಜಿ ಗುಂಪಾದ ಬಿಸ್ಮಿಲ್ಲಾ ತಂಡದ ನೆರವಿನಿಂದ ಈ ಉಪಕ್ರಮಕ್ಕೆ ತೊಡಗಿಸಲಾಗಿದೆ. ಎರಡು ಎಕ್ರೆ ನಿವೇಶನದಲ್ಲಿ ಮರಗಳ ಕಂಬಗಳ ಅಲಭ್ಯತೆಯ ಕಾರಣ ಕಲ್ಲ ಕಂಬ ಬಳಸಿ ಪ್ರಯತ್ನ ಮಾಡಲಾಗಿದೆ. ಯಶ್ವಿಯಾಗಿರುವುದು ಸಂತಸ ತಂದಿದೆ. ಶಾಶ್ವತವಾಗಿ ಈ ಕಂಬಗಳಿರುವುದರಿಂದ ಮುಂದಿನ ಬೆಳೆಗಳಿಗೂ ಬಳಕೆಯಾಗಲಿದೆ ಎಂಬುದು ಸಂತಸಕರ.
                             ಖೈರುನ್ನೀಸಾ.
                 ಮುಳಿಯಾರು ಪಂಚಾಯತಿ ಸಿಡಿಎಸ್ ಅಧ್ಯಕ್ಷೆ.    
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries