ಕಾಸರಗೋಡು : ಖಾಸಗಿ ಬಸ್ಮಾಲಿಕರ ಸಂಘದ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ವಿವಿಧ ಬೇಡಿಕೆ ಮುಮದಿರಿಸಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ವಿದ್ಯಾರ್ಥಿಗಳ ರಿಯಾಯಿತಿ ದರ ಶೇ.50ಕ್ಕೆ ನಿಗದಿಪಡಿಸಬೇಕು, ರಿಯಾಯತಿಗೆ ವಯೋಮಿತಿ ನಿಗದಿಪಡಿಸಬೇಕು, ಡೀಸೆಲ್ ಮೇಲಿನ ಹೆಚ್ಚುವರಿ ಸೆಸ್ ಹಿಂಪಡೆಯಬೇಕು, ಬಸ್ಗಳಲ್ಲಿ ಕ್ಯಾಮೆರಾ ಅಳವಡಿಕೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು, ಖಾಸಗಿ ಬಸ್ಗಳಿಗೆ ದೂರವ್ಯಾಪ್ತಿ ಪರಿಗಣಿಸದೆ ಪರ್ಮಿಟ್ ಒದಗಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ಆಯೋಜಿಸಲಾಗಿತ್ತು.
ಸಂಸದ ರಾಜಮೋಹನ್ ಉನ್ಣಿತ್ತಾನ್ ಧರಣಿ ಉದ್ಘಾಟಿಸಿದರು. ಅಧ್ಯಕ್ಷ ಕೆ. ಗಿರೀಶಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಜಂಟಿ ಕಾರ್ಯದರ್ಶಿ ಸತ್ಯನ್ ಪೂಚಕ್ಕಾಡ್, ಕೇಂದ್ರ ಸಮಿತಿ ಸದಸ್ಯ ಕೆ. ಮಹಮ್ಮದ್ ಕುಞÂ, ಜಿಲ್ಲಾ ಕೋಶಾಧಿಕಾರಿ ಪಿ.ಎ. ಮುಹಮ್ಮದ್ ಕುಞ, ಜಿಲ್ಲಾ ಜತೆ ಕಾರ್ಯದರ್ಶಿ ಶಂಕರ ನಾಯ್ಕ್, ಹೊಜದುರ್ಗ ತಾಲೂಕು ಅಧ್ಯಕ್ಷ ಚಿ. ರವಿ, ರಾಜ್ಯ ಸಮಿತಿ ಸದಸ್ಯ ಎ.ವಿ. ಪ್ರದೀಪ್ ಕುಮಾರ್ ಸ್ವಾಗತಿಸಿದರು.
ವಿವಿಧ ಬೇಡಿಕೆ ಮುಂದಿರಿಸಿ ಖಾಸಗಿ ಬಸ್ ಮಾಲೀಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ
0
March 01, 2023
Tags