HEALTH TIPS

ಇಂದು ನಾರಾಯಣಮಂಗಲದಲ್ಲಿ ವಸಂತ ಕಾವ್ಯೋತ್ಸವ: ಸಿರಿಗನ್ನಡ ವೇದಿಕೆ ಕಾಸರಗೋಡು ಆಯೋಜನೆ


                ಕುಂಬಳೆ: ಸಿರಿಗನ್ನಡ ವೇದಿಕೆ ಬೆಂಗಳೂರು ಇದರ ಕೇರಳ ಗಡಿನಾಡ ಘಟಕದ ವಿಂಶತ್ಯುತ್ಸವದ ಅಂಗವಾಗಿ ವಸಂತ ಕಾವ್ಯೋತ್ಸವ 2023 ಇಂದು(ಮಾ.19) ಕುಂಬಳೆ ಸಮೀಪದ ನಾರಾಯಣಮಂಗಲದ 'ಶ್ರೀನಿಧಿ' ಮನೆಯಲ್ಲಿ ನಡೆಯಲಿದೆ.
            ಅಪರಾಹ್ನ 2:30 ಕ್ಕೆ ಕೇರಳ ಗಡಿನಾಡ ಘಟಕದ ಅಧ್ಯಕ್ಷ ವಿ.ಬಿ. ಕುಳಮರ್ವ ಅವರ ನಿವಾಸದಲ್ಲಿ ಶ್ರೀಮತಿ ಲಲಿತಾಲಕ್ಷ್ಮೀ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಹಿರಿಯ ಗಮಕಿಗಳಾದ ಶಂಕರನಾರಾಯಣ ಭಟ್ ತೆಕ್ಕೇಕೆರೆ, ಸಾಹಿತಿ ವಾಮನರಾವ್ ಬೇಕಲ್, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು ಶುಭಾಶಂಸನೆ ನೆರವೇರಿಸಲಿದ್ದಾರೆ.
       ಅನುಷಾ ಎಸ್ ಪ್ರಾರ್ಥನೆ ಗೀತೆ ಹಾಡಲಿದ್ದಾರೆ. ಬಳಿಕ ಶ್ರದ್ಧಾ ಭಟ್ ನಾಯರ್ಪಳ್ಳ ಅವರಿಂದ ಗಾಯನ, ಗಮಕ ವಾಚನ- ವ್ಯಾಖ್ಯಾನವಿದೆ. ಇದಕ್ಕೆ ಮುನ್ನ ಟಿ.ಕೆವಿ ಭಟ್ ವಿರಚಿತ 'ಮುಕ್ತಕ ಸುಮ ' ಹಾಗೂ ಶ್ರೀಮತಿ ಲಕ್ಷ್ಮೀ ವಿ. ಭಟ್, ಮಂಜೇಶ್ವರ ಅವರ ಜನಮಾನ್ಯ ಮುಕ್ತಕಗಳು ಕೃತಿ ಬಿಡುಗಡೆಯಾಗಲಿವೆ. ಈ ಕೃತಿಗಳನ್ನು ಡಾ. ಪಾದೇಕಲ್ಲು ವಿಷ್ಣು ಭಟ್ಟ ಮತ್ತು ವಿ.ಬಿ. ಕುಳಮರ್ವ ಅವರು ಲೋಕಾರ್ಪಣೆ ಮಾಡಲಿದ್ದಾರೆ.
          ಬಳಿಕ ಟಿ.ಎ.ಎನ್ ಖಂಡಿಗೆ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಕವಿಗಳಿಂದ ಕವಿಗೋಷ್ಠಿ ನಡೆಯಲಿದೆ. ಸುಮಾರು 26 ಮಂದಿ ಕವಿಗಳು- ಕವಯಿತ್ರಿಯರು ಭಾಗವಹಿಸಲಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries