HEALTH TIPS

ವಾತಾವರಣದಲ್ಲಿ ಪ್ರತಿ-ಸುಳಿ: ಬೇಸಿಗೆ ಮಳೆ ಬಾರದಿದ್ದರೆ ರಾಜ್ಯವೇ ಹೊತ್ತಿ ಉರಿಯುವತ್ತ!


                ತಿರುವನಂತಪುರಂ: ರಾಜ್ಯದಲ್ಲಿ ನಿನ್ನೆ ಹಲವೆಡೆ ತಾಪಮಾನ ಅತಿ ಹೆಚ್ಚಳದೊಂದಿಗೆ ದಾಖಲಾಗಿದೆ. ರಾಜ್ಯದಲ್ಲಿ ವಿಶೇಷ ಮುನ್ನೆಚ್ಚರಿಕೆಗಳಿಲ್ಲದಿದ್ದರೂ, ಹಿಂದಿನ ದಿನಗಳಂತೆಯೇ ಬಿಸಿಲಿನ ತಾಪ ಇಂದೂ ಹೆಚ್ಚಳದೊಂದಿಗೆ ಮುಂದುವರಿಯಲಿದೆ.
         ಕಳೆದ ದಿನ, ಹಲವೆಡೆ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಹತ್ತಿರ ವರೆಗೂ ದಾಖಲಾಗಿತ್ತು.
            ಕಣ್ಣೂರು, ಕಾಸರಗೋಡು ಮತ್ತು ಪಾಲಕ್ಕಾಡ್‍ನಲ್ಲಿ ನಿನ್ನೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ವಾತಾವರಣದಲ್ಲಿ ಪ್ರತಿ-ಸುಳಿಯ ಉಪಸ್ಥಿತಿಯಿಂದಾಗಿ ತಾಪಮಾನ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.
           ಬಿಸಿಲಿನೊಂದಿಗೆ ನೀರಿನ ಕೊರತೆ ಉಲ್ಬಣಗೊಳ್ಳಲಿದೆ ಎಂದು ಕೇರಳ ಜಲಸಂಪನ್ಮೂಲ ಅಭಿವೃದ್ಧಿ ಮತ್ತು ಬಳಕೆ ಕೇಂದ್ರ (ಸಿಡಬ್ಲ್ಯುಆರ್‍ಡಿಎಂ) ಎಚ್ಚರಿಸಿದೆ. ಬೇಸಿಗೆ ಮಳೆ ಬಾರದೇ ಇದ್ದಲ್ಲಿ ಜಲಮೂಲಗಳಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿಯಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಕಡಿಮೆ ಮಳೆಯು ವಾತಾವರಣದ ಆವಿಯಾಗುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ನೀರಿನ ಮಟ್ಟದಲ್ಲಿ ದೊಡ್ಡ ಕುಸಿತವನ್ನು ಉಂಟುಮಾಡುತ್ತದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries