HEALTH TIPS

16 ಖಾಸಗಿ ವ್ಯಕ್ತಿಗಳಿಂದ 27 ಹೆಕ್ಟೇರ್ ಭೂಮಿ ಖರೀದಿಗೆ ವಿಶೇಷ ಸಮಿತಿ ತೀರ್ಮಾನ

 
                ಕಾಸರಗೋಡು: ಭೂರಹಿತ ಪರಿಶಿಷ್ಟ ಪಂಗಡದವರಿಗೆ ನ್ಯಾಯಯುತ ಬೆಲೆಯಲ್ಲಿ ಭೂಸ್ವಾಧೀನ ಯೋಜನೆಗಾಗಿ ಖಾಸಗಿ ವ್ಯಕ್ತಿಗಳಿಂದ ಭೂ ಸ್ವಾಧೀನಪಡಿಸಿಕೊಳ್ಳುವ ಕುರಿತು ಖರೀದಿ ಸಮಿತಿಯು ಚರ್ಚೆ ನಡೆಸಿತು.
              ಕಾಸರಗೋಡು ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್ ಹಾಲ್‍ನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿಯಿಂದ ಶಿಫಾರಸ್ಸು ಮಾಡಿದ ವೆಲಾರಿಕುಂಡ್ ತಾಲೂಕಿನ ಜಮೀನು ಮಾಲೀಕರೊಂದಿಗೆ ಖರೀದಿ ಸಮಿತಿಯು ಚರ್ಚೆ ನಡೆಸಿದ್ದು, ಎಲ್ಲ ರೀತಿಯ ಪರಿಶೀಲನೆ ನಡೆಸಿ ಭೂಮಿ ಖರೀದಿಗೆ ಯೋಗ್ಯವಾಗಿರುವುದನ್ನು ಪತ್ತಹಚ್ಚಿದೆ.  29 ಮಂದಿ ಭೂಮಾಲೀಕರು ಚರ್ಚೆಯಲ್ಲಿ ಭಾಗವಹಿಸಿದ್ದರು.
               ಸಭೆಯಲ್ಲಿ ಜಮೀನು ಮಾರಾಟ ಮಾಡಲು ಇಚ್ಛಿಸುವ 16 ಜನರಿಂದ 27 ಗುಂಟೆ ಜಮೀನು ಖರೀದಿಸಲು ತೀರ್ಮಾನಿಸಲಾಯಿತು. ರಾಜ್ಯ ಸಮಿತಿ ಸಭೆಯ ನಂತರ ಮುಂದಿನ ಕ್ರಮ ಕೈಗೊಳ್ಳಲು ಸಮಿತಿ ತೀರ್ಮಾನಿಸಿದೆ. ಅಪರ ಜಿಲ್ಲಾಧಿಕಾರಿ ಸುಫ್ಯಾನ್ ಅಹ್ಮದ್,  ಹಣಕಾಸು ಅಧಿಕಾರಿ ಎಂ. ಶಿವಪ್ರಕಾಶನ ನಾಯರ್, ಪರಪ್ಪ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಹೆರಾಲ್ಡ್ ಜಾನಿ, ವೆಳ್ಳರಿಕುಂಡು ತಹಸೀಲ್ದಾರ್ ಪಿ.ವಿ.ಮುರಳಿ, ಅರಣ್ಯಾಧಿಕಾರಿ ಪ್ರತಿನಿಧಿ, ಜಿಲ್ಲಾ ನೋಂದಣಾಧಿಕಾರಿ ಪ್ರತಿನಿಧಿ, ಸರ್ವೆ ಅಧೀಕ್ಷಕ ಪ್ರತಿನಿಧಿ  ಉಪಸ್ಥಿತರಿದ್ದರು.
 
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries