HEALTH TIPS

ಹೊಸ ನಡೆ: ಭೀತಿ ಮತ್ತು ಗದ್ದಲ: ಕ್ರೈಸ್ತ ಮನೋವಿಕಾರದಲ್ಲಿ ಸಿಪಿಎಂ, ಬಿಜೆಪಿಯಿಂದ ಕೇರಳದಲ್ಲಿ ಕಿತ್ತಾಟ


            ತಿರುವನಂತಪುರಂ: ಕೇರಳ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸಿಪಿಎಂ ಮತ್ತು ಬಿಜೆಪಿ ಎರಡು ರಾಜಕೀಯ ಪಕ್ಷಗಳು ರಾಜಕೀಯ ಕೆಸರೆರಚಾಟದಲ್ಲಿ ಪರಸ್ಪರ ತೊಡಗಿಕೊಂಡಿರುವುದು ಇತ್ತೀಚಿನ ಬೆಳವಣಿಗೆ. ಕ್ರಿಶ್ಚಿಯನ್ ಚರ್ಚ್ ಮುಖ್ಯಸ್ಥರ ಒಂದು ವಿಭಾಗವನ್ನು ಸಿಪಿಎಂ ಟೀಕಿಸಿದರೆ ಮತ್ತೊಂದು ವಿಭಾಗವನ್ನು ಬಿಜೆಪಿ ಟೀಕಿಸುತ್ತಿದೆ.
            ಸಿಪಿಎಂನ ಪ್ರಕಟಣೆಯಾದ 'ಪೀಪಲ್ಸ್ ಡೆಮಾಕ್ರಸಿ'ಯ ಇತ್ತೀಚಿನ ಸಂಪಾದಕೀಯದಲ್ಲಿ, ಬಿಜೆಪಿ ಸರ್ಕಾರದ ಪಟ್ಟುಬಿಡದ ಒತ್ತಡದ ಅಡಿಯಲ್ಲಿ ಕೆಲವು ಚರ್ಚ್ ನಾಯಕರು ತಮ್ಮ ನಿಲುವನ್ನು ರಾಜಿ ಮಾಡಿಕೊಂಡಿದ್ದಾರೆ ಎಂದು ಪಕ್ಷವು ಆರೋಪಿಸಿದೆ. ತಲಶ್ಶೇರಿ ಆರ್ಚ್‍ಡಯಾಸಿಸ್‍ನ ಆರ್ಚ್‍ಬಿಷಪ್ ಜೋಸೆಫ್ ಪಂಪ್ಲಾನಿ ಮತ್ತು ಕಾರ್ಡಿನಲ್ ಜಾರ್ಜ್ ಅಲೆಂಚೇರಿ ಅವರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ. ಸಂದರ್ಶನವೊಂದರಲ್ಲಿ ಮೋದಿ "ಒಳ್ಳೆಯ ನಾಯಕ" ಮತ್ತು ಬಿಜೆಪಿ ಆಡಳಿತದಲ್ಲಿ ಅಭದ್ರತೆ ಇಲ್ಲ ಎಂದಿದ್ದಾರೆ.
           ಸಿಪಿಎಂ ಪ್ರಕಾರ, ಕೇರಳದಲ್ಲಿ ಕ್ರಿಶ್ಚಿಯನ್ ಸಮುದಾಯದ ಮೇಲೆ ಪ್ರಭಾವ ಬೀರಲು ಬಿಜೆಪಿ ದ್ವಿಮುಖ ವಿಧಾನವನ್ನು ಅಳವಡಿಸಿಕೊಂಡಿದೆ. ಮೊದಲನೆಯದಾಗಿ, ಇದು ಕ್ಯಾಥೋಲಿಕ್ ಸಮುದಾಯದಲ್ಲಿ, ವಿಶೇಷವಾಗಿ ಸಿರೋ-ಮಲಬಾರ್ ಚರ್ಚ್‍ನಲ್ಲಿ ಮುಸ್ಲಿಂ ವಿರೋಧಿ ಭಾವನೆಗಳನ್ನು ಉಂಟುಮಾಡಲು ಪ್ರಯತ್ನಿಸಿದೆ. ಎರಡನೆಯದಾಗಿ, ಬಿಜೆಪಿ-ಆರ್‍ಎಸ್‍ಎಸ್ ರಾಜಕೀಯಕ್ಕೆ ಹೊಂದಿಕೆಯಾಗದ ಯಾರನ್ನೂ ಬಗ್ಗುಬಡಿಯಲು ಮೋದಿ ಸರ್ಕಾರ ಬೆದರಿಕೆ ತಂತ್ರಗಳನ್ನು ಬಳಸುತ್ತಿದೆ ಎಂದು ಆರೋಪಿಸಲಾಗಿದೆ.
           ಚರ್ಚ್ ಆಫ್ ಸೌತ್ ಇಂಡಿಯಾದ ಮಾಡರೇಟರ್ ಬಿಷಪ್ ಧರ್ಮ ರಾಜ್ ಮತ್ತು ಧಾರ್ಮಿಕ ಮುಖಂಡರಾದ ಕೆ ಪಿ ಯೋಹಾನನ್ ಮತ್ತು ಪಾಲ್ ದಿನಕರನ್ ಸೇರಿದಂತೆ ವಿವಿಧ ಚರ್ಚ್ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯವು ತನಿಖೆಯನ್ನು ಪ್ರಾರಂಭಿಸಿದೆ. ಎರ್ನಾಕುಳಂ-ಅಂಗಮಾಲಿ ಆರ್ಚ್‍ಬಿಷಪ್ ಕಾರ್ಡಿನಲ್ ಜಾರ್ಜ್ ಅಲೆಂಚೇರಿ ಅವರನ್ನೂ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
         ಹೆಚ್ಚುವರಿಯಾಗಿ, ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ (ಎಫ್‍ಸಿಆರ್‍ಎ) ಮೂಲಕ ಒತ್ತಡ ಹೇರಲಾಗುತ್ತಿದೆ.
        ಕೇರಳದ ಕ್ರೈಸ್ತರು ಜಾತ್ಯತೀತ ರಚನೆಯ ಅವಿಭಾಜ್ಯ ಅಂಗವಾಗಿದ್ದು, ರಾಜಕೀಯ ಅಜೆಂಡಾಗಳಿಂದ ಪ್ರಭಾವಿತರಾಗಬಾರದು ಎಂದು ಸಿಪಿಎಂ ಸ್ಪಷ್ಟಪಡಿಸಿದೆ.
       ಆದರೆ, ಕ್ರೈಸ್ತ ಚರ್ಚುಗಳಿಗೆ ಸಿಪಿಎಂ ಅಗೌರವ ತೋರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಟೀಕಿಸಿರುವರು. ಬೆದರಿಕೆಯ ಮೂಲಕ ಬಿಜೆಪಿಗೆ ನೀಡಿರುವ ಬೆಂಬಲವನ್ನು ಹಿಂಪಡೆಯುವಂತೆ ಚರ್ಚ್ ಮುಖ್ಯಸ್ಥರ ಮೇಲೆ ಒತ್ತಡ ಹೇರಬಹುದು ಎಂಬುದು ಸಿಪಿಎಂನ ಭ್ರಮೆ ಮಾತ್ರ ಎಂದು ಅವರು ಹೇಳಿದ್ದಾರೆ. “ಎಲ್‍ಡಿಎಫ್‍ನ ಕೋಮುವಾದದ ವಿರುದ್ಧ ಕ್ರಿಶ್ಚಿಯನ್ ಸಮುದಾಯವು ಪ್ರತಿಕ್ರಿಯಿಸುತ್ತಿರುವುದರಿಂದ ಸಿಪಿಎಂ ಅಸಮಾಧಾನದಲ್ಲಿದೆ. ಕ್ರೈಸ್ತ ವಿರೋಧಿ ಲೇಖನಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ,'' ಎಂದರು.
         ಎಲ್‍ಡಿಎಫ್ ಅಧಿಕಾರದಲ್ಲಿದ್ದಾಗಲೂ ಕೇರಳದಲ್ಲಿ ಕ್ರಿಶ್ಚಿಯನ್ನರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿತ್ತು ಎಂದು ಸುರೇಂದ್ರನ್ ಹೇಳಿದ್ದಾರೆ.
        “ಎಲ್‍ಡಿಎಫ್ ಅಧಿಕಾರದಲ್ಲಿದ್ದಾಗ ಕಾಲೇಜು ಶಿಕ್ಷಕ ಜೋಸೆಫ್ ಅವರ ಅಂಗೈ ಕಡಿಯಲಾಗಿತ್ತು. ಪಾಲಾ ಬಿಷಪ್‍ನ ಆರ್ಚ್‍ಡಯಾಸಿಸ್ ಕಡೆಗೆ ಮೆರವಣಿಗೆ ನಡೆಸಿದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರೊಂದಿಗೆ ಸಿಪಿಎಂ ಇತ್ತು ಎಂದವರು ಬೊಟ್ಟುಮಾಡಿದ್ದಾರೆ.
    ಒಟ್ಟು ಕೇರಳದ ರಾಜಕೀಯ ವಲಯದಲ್ಲಿ ಬಿಜೆಪಿಯ ಕ್ರೈಸ್ತಪರ ನಡೆ ಕುತೂಹಲ ಮೂಡಿಸಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries