ಸಮರಸ ಚಿತ್ರಸುದ್ದಿ: ಮಧೂರು: ಕುಂಬಳೆ ಸೀಮೆಯ ಪ್ರಮುಖ ದೇಗುಲಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ದವಿನಾಯಕ ದೇವಸ್ಥಾನನದಲ್ಲಿ ಏಪ್ರಿಲ್ 14ರಿಂದ 18ವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು, ಪೂರ್ವಭಾವಿಯಾಗಿ ಶ್ರೀ ಕ್ಷೇತ್ರದಲ್ಲಿ ಗೊನೆ ಕಡಿಯುವ ಸಮಾರಂಭ ಶನಿವಾರ ನಡೆಯಿತು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಟಿ.ಸಿ ಕೃಷ್ಣವರ್ಮ ರಾಜ, ರಾಘವ ಮಣಿಯಾಣಿ, ಎ.ಸುಬ್ರಹ್ಮಣ್ಯ ಭಟ್, ಬಿ.ಎನ್. ಸುಬ್ರಹ್ಮಣ್ಯ ಮೊದಲಾದವರು ಉಪಸ್ಥಿತರಿದ್ದರು.
ಮಧೂರು ಜಾತ್ರೆ: ಗೊನೆ ಮುಹೂರ್ತ
0
April 01, 2023