ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರಿಸುವ ಉದ್ದೇಶದಿಂದ ಬಿಜೆಪಿಯು 'ಇನ್ನೊಮ್ಮೆ ಮೋದಿ ಸರ್ಕಾರ' ಹೆಸರಿನಡಿ ಗೋಡೆ ಬರಹದ ಅಭಿಯಾನವೊಂದನ್ನು ಕೈಗೊಂಡಿದೆ.
ಬಿಜೆಪಿ ಸಂಸ್ಥಾಪನಾ ದಿನವಾದ ಗುರುವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇಲ್ಲಿನ ಬಂಗಾಳಿ ಮಾರುಕಟ್ಟೆಯಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.