HEALTH TIPS

ಭಕ್ತರ ದರ್ಶನಕ್ಕೆ ತೆರೆದ ಬದರಿನಾಥ ದೇವಾಲಯ

                ದರಿನಾಥ (PTI): 'ಉತ್ತರಾಖಂಡದ ಬದರಿನಾಥ ದೇವಾಲಯವನ್ನು ಗುರುವಾರ ಬೆಳಿಗ್ಗೆ 7.10ಕ್ಕೆ ಭಕ್ತರ ದರ್ಶನಕ್ಕೆ ತೆರೆಯಲಾಗಿದ್ದು, ಮೊದಲ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ನೆರವೇರಿಸಲಾಯಿತು' ಎಂದು ದೇಗುಲದ ಸಮಿತಿ ಹೇಳಿದೆ.

                ಸಣ್ಣ ಪ್ರಮಾಣದಲ್ಲಿ ಹಿಮ ಮತ್ತು ಮಳೆ ಸುರಿಯುತ್ತಿದ್ದರೂ, ದೇವರ ದರ್ಶನ ಪಡೆಯಲು ದೇವಾಲಯದಲ್ಲಿ ಸಾವಿರಾರು ಭಕ್ತರು ನೆರೆದಿದ್ದರು. ಇಡೀ ದೇಗುಲವನ್ನು 15 ಕ್ವಿಂಟಲ್‌ ಹೂವುಗಳಿಂದ ಅಲಂಕರಿಸಲಾಗಿತ್ತು.


                  ದೇವಸ್ಥಾನದ ಮುಖ್ಯ ಅರ್ಚಕ ಈಶ್ವರಿ ಪ್ರಸಾದ್‌ ನಂಬೂದಿರಿ ಅವರು ಗರ್ಭಗುಡಿಯಲ್ಲಿ ವಿಶೇಷ ಪೂಜೆ ನೆರವೇರಿಸಿ, ಸರ್ವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದರು. ಇದೇ ವೇಳೆ ಹೆಲಿಕಾಪ್ಟರ್‌ ಮೂಲಕ ದೇವಸ್ಥಾನದ ಮೇಲೆ ಪುಷ್ಪವೃಷ್ಟಿ ಸುರಿಸಲಾಯಿತು.

                ಬದರಿನಾಥ ದೇಗುಲವನ್ನು ತೆರೆಯುವುದರೊಂದಿಗೆ, ಉತ್ತರಾಖಂಡದ ಎಲ್ಲಾ ಚಾರ್ ಧಾಮ್‌ ದೇವಾಲಯಗಳು ಈಗ ಯಾತ್ರಾರ್ಥಿಗಳಿಗೆ ತೆರೆದಂತಾಗಿದೆ. ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಏಪ್ರಿಲ್ 22ರಂದು ಮತ್ತು ಕೇದಾರನಾಥ ದೇವಾಲಯವನ್ನು ಏಪ್ರಿಲ್ 25ರಂದು ತೆರೆಯಲಾಗಿತ್ತು.

 ದೇಗುಲದೊಳಕ್ಕೆ ಪ್ರವೇಶಿಸುತ್ತಿರುವ ಭಕ್ತರು -ಪಿಟಿಐ ಚಿತ್ರ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries