ಪೆರ್ಲ: ಮಾತೃಭೂಮಿ ಗ್ರಾಮೀಣ ಗ್ರಂಥಾಲಯ ಸಾಯ ಹಾಗೂ ಬಾಲವೇದಿ, ಬಾಲ ಸಂಘ ಸಾಯ ಜಂಟಿ ಅಶ್ರಯದಲ್ಲಿ "ಮಕ್ಕಳ ಹಬ್ಬ" ಎಂಬ ರಂಗ ಶಿಬಿರ ಗ್ರಂಥಾಲಯ ಸಭಾಂಗಣದಲ್ಲಿ ಜರಗಿತು.
ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ಹಾಗೂ ಮಕ್ಕಳ ರಂಗ ತಜ್ಞ ಉದಯ ಸಾರಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಾಲವೇದಿಯ ಕಾರ್ಯದರ್ಶಿ ಹವಿಶ್ಯ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಘಟಕ,ಪತ್ರಕರ್ತ ಜಯ ಮಣಿಯಂಪಾರೆ ಮುಖ್ಯ ಅತಿಥಿಗಳಾಗಿದ್ದರು. ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ಸಂಪನ್ಮೂಲ ವ್ಯಕ್ತಿಯಾಗಿ ತರಗತಿ ನಡೆಸಿದರು.ಸೂರಜ್ ಸಾಯ,ಸುರೇಶ್, ಶಶಿಧರ್ ನಾಯಕ್, ವೀಣಾ ಸಾಯ, ರಾಮಚಂದ್ರ ಸಾಯ,ಹರಿಶ್ಚಂದ್ರ ಸಾಯ,ವಿಜಯ ಸಾಯ ಮೊದಲಾದವರು ನೇತೃತ್ವ ನೀಡಿದರು.