ಬದಿಯಡ್ಕ: ಕಳೆದ 36 ವರ್ಷಗಳಿಂದ ಏತಡ್ಕ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದುತ್ತಿರುವ ವಿಜಯಲಕ್ಷ್ಮಿ ಯವರನ್ನು ಜಿಲ್ಲಾ ಪಂಚಾಯತಿ ಸದಸ್ಯೆ ಶೈಲಜಾ ಭಟ್ ಅವರು ಬೀಳ್ಕೊಟ್ಟು ಗೌರವಿಸಿದರು. ಈ ಸಂದರ್ಭದಲ್ಲಿ ಪಂಚಾಯತಿ ಸದಸ್ಯ ಕೃಷ್ಣ ಶರ್ಮಾ. ಜಿ, ಪಂಚಾಯತಿ ಮಾಜಿ ಸದಸ್ಯ ವೈ.ಕೆ. ಗಣಪತಿ ಭಟ್, ಚಂದ್ರಶೇಖರ ಭಟ್ ಏತಡ್ಕ, ಶಶಿಧರ ಪಡಿಕ್ಕಲ್ಲು ಮತ್ತು ಅಂಗನವಾಡಿ ಮಕ್ಕಳ ಹೆತ್ತವರು ಉಪಸ್ಥಿತರಿದ್ದರು.