ಕುಂಬಳೆ: ಸಿಒಡಿಪಿ ಮಂಗಳೂರು ಹಾಗೂ ಸ್ಪಂದನಾ ಮಹಿಳಾ ಒಕ್ಕೂಟ ಕುಂಬಳೆ ಇದರ ಸಂಯುಕ್ತ ಆಶ್ರಯದಲ್ಲಿ ಕುಂಬಳೆಯ ಸಂತ ಮೋನಿಕಾ ಚರ್ಚ್ ಪರಿಸರದಲ್ಲಿ ಬೃಹತ್ ಪರಿಸರ ಸಂರಕ್ಷಣಾ ಸಮಾವೇಶ ಜರಗಿತು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ನಾವು ಪ್ರತಿಯೊಬ್ಬರು ಪರಿಸರದೊಂದಿಗೆ ಬದ್ಧತೆ ಬೆಳೆಸಿಕೊಂಡು ಮಾಲಿನ್ಯ ರಹಿತವಾಗಿ ಸ್ವಚ್ಛಂದತೆಯಿಂದ ಪ್ರಾಣಿ ಪಕ್ಷ ಜೀವಿಗಳಿಗೆ ಈ ಭೂಮಿಯನ್ನು ಮುಂದಿನ ತಲೆಮಾರಿಗೆ ಕಾಯ್ದಕೊಳ್ಳಲು ಪ್ರತಿಜ್ಞಾಬದ್ಧರಾಗಬೇಕಿದ್ದು ಇಲ್ಲದಿದ್ದರೆ ಗಾಳಿ,ನೀರಿಗೂ ಹೋರಾಟಕ್ಕಿಳಿಯಬೇಕಾದ ಪರಿಸ್ಥಿತಿ ಬರಲಿದೆ ಎಂದರು.
ಸಂತ ಮೋನಿಕಾ ಚರ್ಚಿನ ಧರ್ಮಗುರುಗಳಾದ ಫಾ.ಅನಿಲ್ ಪ್ರಕಾಶ್ ಡಿ.ಸಿಲ್ವ ಸಭೆಯ ಅಧ್ಯಕ್ಷತೆವಹಿಸಿದ್ದರು. ಮಂಜೇಶ್ವರ ಬ್ಲೋಕ್ ಪಂ.ಅಧ್ಯಕ್ಷೆ ಸೇಮಿನಾ ಟೀಚರ್ ಕುಂಬಳೆ ಗ್ರಾ.ಪಂ.ಅಧ್ಯಕ್ಷೆ ತಾಹೀರಾ ಯೂಸುಫ್ ಕೆ.ವಿ, ಗ್ರಾ.ಪಂ.ಸದಸ್ಯ ವಿವೇಕಾನಂದ ಶೆಟ್ಟಿ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ರಾಜು ಸ್ಟೀಫನ್ ಡಿ.ಸೋಜ ಕುಂಬಳೆ, ಕಾರ್ಯದರ್ಶಿ ಲೀಡಿಯಾ ಡಿ.ಸೋಜ, ಸ್ಪಂದನಾ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಲಕ್ಷ್ಮಿ , ಸಿಒಡಿಪಿಯ ಪೀಟರ್ ಪೌಲ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ವಿವಿಧ ಆಯಾಮದಲ್ಲಿ ಕೊಡುಗೆ ನೀಡುತ್ತಿರುವ ಹರೀಶ್ಚಂದ್ರ ಸಾಯ, ಅಲ್ಬರ್ಟ್ ಡಿ.ಸೋಜ ಸಾಯ,ಆಂಟನಿ ಡಿ.ಸೋಜ ಶಾಂತಿಪಳ್ಳ, ಪುಷ್ಪಲತಾ ಬೆದ್ರಂಪಳ್ಳ, ರಯಾನ ಪಾಡಿ, ಲಕ್ಷ್ಮಿ ಸಾಲೆತ್ತಡ್ಕ, ಪೆÇ್ಲೀರಾ ಕ್ರಾಸ್ತಾ ಕಿದೂರು, ರಾಧಿಕಾ ಸೂರಂಬೈಲು, ಶಾಲಿನಿ ಕಣ್ಣೂರು ಅವರನ್ನು ಸನ್ಮಾನಿಸಲಾಯಿತು. ಬಳಿಕ ಅನಂದ್ ಪೆಕ್ಕಡಾಂ ಅವರಿಂದ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ಹಾಗೂ ಸ್ಪಂದನಾ ಮಹಿಳಾ ಒಕ್ಕೂಟದ ವಿವಿಧ ಘಟಕಗಳ ಸದಸ್ಯೆಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು.ಕಾರ್ಯಕ್ರಮದಂಗವಾಗಿ ಚರ್ಚ್ ಪರಿಸರದಲ್ಲಿ ಪರಿಸರ ಸ್ನೇಹಿ ಬೆಂಚು ಹಾಗೂ ಹಣ್ಣಿನ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಘಟಕದವರಿಂದ ಸ್ವ ಉತ್ಪನ್ನದ ತಿಂಡಿ,ತಿನಿಸು ಖಾದ್ಯಗಳ ಮಾರಾಟ ಮಳಿಗೆ ಸ್ಥಾಪಿಸಲಾಗಿತ್ತು. ಸಿಒಡಿಪಿಯ ನಿರ್ದೇಶಕ ಫಾ.ವಿನ್ಸೆಂಟ್ ಡಿ.ಸೋಜ ಸ್ವಾಗತಿಸಿ ಪ್ರಸ್ತಾವನೆಗೈದರು.ಸ್ಪಂದನಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜಯಶ್ರೀ ಮೊಂತೆರೊ ವಂದಿಸಿದರು. ರವಿ ಕುಮಾರ್ ಕ್ರಾಸ್ತ ಹಾಗೂ ವಿಜಯ ಡಿ.ಸೋಜ ನಿರೂಪಿಸಿದರು.