ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗಿಗಳ ಅಭಾವ, ನೂತನ ನೇಮಕಾತಿಗೆ ರಾಜ್ಯ ಸÀರ್ಕಾರ ನೇಮಕಾತಿ ಮಾಡದೆ ಇರುವುದರಿಂದ ಜನತೆಯ ಅಗತ್ಯ ಕಾರ್ಯಗಳಿಗೆ ಅನುಮತಿ ವಿಳಂಬವಾಗುತ್ತಿದೆ. ಇದರ ವಿರುದ್ದ ಕೂಡಲೇ ಅಗತ್ಯ ಉದ್ಯೋಗಿಗಳ ನೇಮಕಾತಿ ಆಗ್ರಹಿಸಿ ಪಂಚಾಯತಿ ಅಧ್ಯಕ್ಷೆ ಜೀನ್ ಲವಿನ ಮೊಂತೇರೋ ನೇತೃತ್ವದಲ್ಲಿ ಕಾಸರಗೋಡು ಸ್ಥಳೀಯ ಆಡಳಿತ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಮುಂಭಾಗ ಪ್ರತಿಭಟಿಸಿ ಅಧಿಕಾರಿಗಳಿಗೆ ಮನವಿ ನೀಡಲಾಯಿತು.
ರಾಜ್ಯ ಲೋಕಸೇವಾ ಆಯೋಗದ ಖಾಯಂ ನೇಮಕಾತಿಯ ಮೂಲಕ ಉದ್ಯೋಗಿಗಳ ನೇಮಕಕ್ಕೆ ಅಗ್ರಹಿಸಲಾಯಿತು. ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿ, ಹಾಗೂ ರಾಜ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷೆ ಜೀನ್ ಲವೀನ ಮೊಂತೆರೋ ತಿಳಿಸಿದರು.
ಉಪಾಧ್ಯಕ್ಷ ಒ.ಮೊಹಮ್ಮದ್ ಸಿದ್ದಿಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ರಾಧಾ, ಸದಸ್ಯರಾದ ಆದರ್ಶ್ ಬಿಎಂ, ಅಬ್ದುಲ್ಲ ರೆಹಮಾನ್ ಮಾತನಾಡಿದರು.
ಸದಸ್ಯರಾದ ಕುಲ್ಸುಮ್ಮ, ಸಮೀರಾ, ಜಯಂತಿ, ಲಕ್ಷ್ಮಣ ಬಿಎಂ, ಮಜಲ್ ರಾಜೇಶ್, ವಿನಯ ಭಾಸ್ಕರ್, ರುಬೀನ ಉಪಸ್ಥಿತರಿದ್ದರು. ಪ್ರತಿಭಟನೆ ಬಳಿಕ ಅಧಿಕಾರಿಗಳÀನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.