HEALTH TIPS

ರಾಜ್ಯದ ಕಾರಾಗೃಹಗಳಲ್ಲಿ ಧಾರ್ಮಿಕ ಆಚರಣೆಗಳ ಮೇಲಿನ ನಿಷೇಧ ಹಿಂಪಡೆದ ಕಾರಾಗೃಹ ಇಲಾಖೆ


                 ತಿರುವನಂತಪುರಂ: ರಾಜ್ಯದ ಕಾರಾಗೃಹಗಳಲ್ಲಿ ಧಾರ್ಮಿಕ ತರಗತಿಗಳು ಮತ್ತು ಪೂಜೆಗಳ ಮೇಲಿನ ನಿಷೇಧವನ್ನು ಕಾರಾಗೃಹ ಇಲಾಖೆ ಹಿಂಪಡೆದಿದೆ.
               ಘಟನೆಯಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಜೈಲು ಇಲಾಖೆ ಹಿಂಪಡೆದಿದೆ. ಅಧ್ಯಾತ್ಮಿಕ ಚಟುವಟಿಕೆಗಳ ಬದಲಾಗಿ ಪ್ರೇರಣಾ ತರಗತಿಗಳನ್ನು ನೀಡಬೇಕು ಎಂದು ಕಾರಾಗೃಹ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಪವಿತ್ರ ವಾರದ ಪ್ರಾರ್ಥನೆಗಳು ನಡೆಯದಿದ್ದಾಗ ಕ್ರಿಶ್ಚಿಯನ್ ಸಂಘಟನೆಗಳು ರಂಗಕ್ಕೆ ಬಂದಿದ್ದವು.
             ಪವಿತ್ರ ಮಾಸದಲ್ಲಿ ಪ್ರಾರ್ಥನೆಗೆಂದು ಸಂಘಟನೆಗಳು ಕಾರಾಗೃಹ ಇಲಾಖೆಯನ್ನು ಸಂಪರ್ಕಿಸಿದಾಗ ಅನುಮತಿ ಇಲ್ಲ ಎಂಬ ಮಾಹಿತಿ ಸಿಕ್ಕಿದೆ. ನಂತರ ಘಟನೆ ವಿವಾದವಾಗುತ್ತಿದ್ದಂತೆ ಪ್ರಸ್ತಾವನೆ ಹಿಂಪಡೆಯಲಾಯಿತು. ಜೈಲು ಇಲಾಖೆ ನಿರ್ದೇಶಕ ಬಲರಾಮ್ ಕುಮಾರ್ ಉಪಾಧ್ಯಾಯ ಮಾತನಾಡಿ, ಆಧ್ಯಾತ್ಮಿಕ ಚಟುವಟಿಕೆಗಳನ್ನು ನಿಲ್ಲಿಸಿಲ್ಲ, ಕೈದಿಗಳಿಗೆ ಪ್ರೇರಕ ತರಗತಿಗಳನ್ನು ನೀಡಲು ಸೂಚಿಸಲಾಗಿದೆ ಎಂದರು.
          ವಿಶೇಷ ಧಾರ್ಮಿಕ ದಿನಗಳಲ್ಲಿ ಅರ್ಜಿ ಸಲ್ಲಿಸಿದರೆ ಕಾನೂನಾತ್ಮಕವಾಗಿ ಪರಿಶೀಲಿಸಿ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries