HEALTH TIPS

ಶಬರಿಮಲೆ ಪೈಂಕುಣಿ ಹಬ್ಬ ಮುಕ್ತಾಯ


             ಪತ್ತನಂತಿಟ್ಟ: ಶಬರಿಮಲೆಯಲ್ಲಿ ಪೈಂಕುಣಿ ಉತ್ರಂ ಆರಾಟ್ ನಿನ್ನೆ ನಡೆಯಿತು. ಬೆಳಗ್ಗೆ 10.30ರ ಸುಮಾರಿಗೆ ಆರಾಟ್ ಮೆರವಣಿಗೆ ಸನ್ನಿಧಾನದಿಂದ ಪಂಪಾಕ್ಕೆ ತೆರಳಿತು.
          ಪಂಪಾದಲ್ಲಿರುವ ವಿಶೇಷ ಕಟ್ಟೆಯಲ್ಲಿ ಆರಾಟ್ ನಡೆಯಿತು. ಆರಾಟ್ ಗಾಗಿ ದೇವರನ್ನು ಪಂಬಾಕ್ಕೆ ಆನೆಯ ಮೇಲೆ ಕರೆತರಲಾಗಿತ್ತು. ವೇಲಿನಲ್ಲೂರು ಮಣಿಕಂಠನ್ ಆನೆ ದೇವರನ್ನು ಹೊತ್ತೊಯ್ದಿತು.
         ಬೆಳಗ್ಗೆ 9 ಕ್ಕೆ ಮೇಲ್ಶಾಂತಿ ಹಾಗೂ ಪರಿವಾರದವರು ಭಕ್ತಿಯಿಂದ ವಿಧಿವಿಧಾನದೊಂದಿಗೆ ಹದಿನೆಂಟನೇ ಮೆಟ್ಟಿಲು ಇಳಿದು ಆಗಮಿಸಿದರು.  ಮೆರವಣಿಗೆಯು ತಿಟ್ಟಂಪಾಡಿ ಮುಂಭಾಗದಿಂದ ಪ್ರಾರಂಭವಾಗಿ ತೀತಂ ಅನಪುರಂ ವರೆಗೆ ಸಾಗಿತು.  ಸರಂಕುತ್ತಿ, ಮರಕೂಟಂ, ಶಬರಿಪೀಠ, ಅಪಾಚ್ಚಿಮೇಡು ಮತ್ತು ನೀಲಿಮಲ ಮೂಲಕ ಸಾಂಪ್ರದಾಯಿಕ ಮಾರ್ಗದಲ್ಲಿ ಪ್ರಯಾಣ ನಡೆಯಿತು.  ಪಂಪಾ ಗಣೇಶ ದೇವಸ್ಥಾನವನ್ನು ತಲುಪಿದಾಗ,  ಆನೆಯ ಮೇಲಿದ್ದ ವಿಗ್ರಹ ತೆಗೆದು ಆರಾಟ್ ಗೆ ತೊಡಗಲಾಯಿತು.
           ತಂತ್ರಿ ಕಂಠಾರರ್ ಮಹೇಶ್ವರರ ನೇತೃತ್ವದಲ್ಲಿ ಸಮಾರಂಭ ನಡೆಯಿತು.  ಮಧ್ಯಾಹ್ನ 12 ಕ್ಕೆ ಆರಾಟ್ ಸಮಾರಂಭಗಳು ಪೂರ್ಣಗೊಂಡಿತು. ನಂತರ ಶಿವೇಲಿ ಬಿಂಬವನ್ನು ಪಂಪಾ ಗಣಪತಿ ದೇವಸ್ಥಾನದಲ್ಲಿ ದರ್ಶನಕ್ಕೆ ಇಡಲಾಯಿತು.  ಸಂಜೆ 4 ರ  ಸುಮಾರಿಗೆ ಶಿವೇಲಿ ಬಿಂಬ ಸನ್ನಿಧಾನಕ್ಕೆ ತರಲಾಯಿತು. ಆರು ಗಂಟೆಗೆ ಸನ್ನಿಧಾನಕ್ಕೆ ಮರಳುವುದರೊಂದಿಗೆ 10 ದಿನಗಳ ಕಾಲ ನಡೆದ ಉತ್ಸವ ಮುಕ್ತಾಯಗೊಂಡಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries