ಕಾಸರಗೋಡು: ನುಳ್ಳಿಪ್ಪಾಡಿ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಇದರ ಸಭಾಂಗಣದಲ್ಲಿ ಭಾನುವಾರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಉಡುಪಿಯ ಶಿಕ್ಷಣತಜ್ಞ, ಸಾಮಾಜಿಕ ಮುಂದಾಳು, ಮೇರುವ್ಯಕ್ತಿತ್ವದ ಡಾ ಬಾಲಕೃಷ್ಣ ಎಸ್ ಮದ್ದೋಡಿ ಇವರಿಗೆ ಕನ್ನಡ ಭವನ ಕಾಸರಗೋಡಿನ ಪ್ರತಿಷ್ಠಿತ ಪ್ರಶಸ್ತಿಯಾದ "ಕನ್ನಡ ಪಯಸ್ವಿನಿ ಪ್ರಶಸ್ತಿ 2023" ನೀಡಿ ಗೌರವಿಸಲಾಯಿತು.
ಕನ್ನಡ ಭವನ ಗ್ರಂಥಾಲಯ ದ ಸ್ಥಾಪಕ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಸಂಚಾಲಕಿ ಸಂದ್ಯಾ ರಾಣಿ ಟೀಚರ್ ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿದರು. ಮುಖ್ಯ ಅಥಿತಿಯಾಗಿ ಆಗಮಿಸಿದ ಶಿಕ್ಷಣ ತಜ್ಞ ಅಭಿಲಾμï ಕ್ಷತ್ರಿಯ ಶಾಲುಹೊದಿಸಿ ಗೌರವಿಸಿ ಅಭಿನಂದನಾ ಭಾಷಣ ಮಾಡಿದರು. ಕಾರ್ಯದರ್ಶಿ ನವೀನಚಂದ್ರ ಅನಂಗೂರ್ ಬೇಕಲ ರಾಮನಾಯಕರ ಸಮಗ್ರ ಸಾಹಿತ್ಯ ಸಂಪುಟ ಪುಸ್ತಕ ನೀಡಿ ಗೌರವಿಸಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ ಮೂಲ್ಕಿ ಸುರತ್ಕಲ್ ರಾಮಕ್ಷತ್ರಿಯ ಸಂಘದ ಕೋಶಾಧಿಕಾರಿ ಶಶಿಕಾಂತ್ ಕುಮಾರ್ ಕೆ ಮಾತನಾಡಿ "ಸತತ ಪ್ರಯತ್ನದಿಂದ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಆ ವ್ಯಕ್ತಿಪ್ರಭಾವವನ್ನು ಸಮಾಜಸೇವೆಗೆ ವ್ಯಯಿಸುವವರನ್ನು ಸಮಾಜ ಗೌರವಿಸುತ್ತದೆ.. ಗೌರವಿಸಬೇಕು, ಅದು ನವಾಗತರೀಗೆ ಪ್ರೇರಣೆ ಎಂದರು. ಕಾರ್ಯದರ್ಶಿ ನವೀನಚಂದ್ರ ಸ್ವಾಗತಿಸಿ, ವಂದಿಸಿದರು.
ಕನ್ನಡ ಪಯಸ್ವಿನಿ ಪ್ರಶಸ್ತಿ ಪ್ರದಾನ
0
April 18, 2023