HEALTH TIPS

ವಂದೇಭಾರತ್ ಸೇವೆಯ ಆರಂಭದೊಂದಿಗೆ ಎರಡು ಪ್ರಮುಖ ರೈಲುಗಳ ಸಮಯ ಬದಲಾವಣೆ

              ತಿರುವನಂತಪುರಂ: ರಾಜ್ಯದಲ್ಲಿ ವಂದೇಭಾರತ್ ಎಕ್ಸ್ ಪ್ರೆಸ್ ಇದೇ 26 ರಿಂದ ಸೇವೆ ಆರಂಭಿಸಲಿದೆ. ಇದರೊಂದಿಗೆ ದಕ್ಷಿಣ ರೈಲ್ವೆಯು ರಾಜ್ಯದ ಎರಡು ಪ್ರಮುಖ ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಿದೆ.

             ತಿರುವನಂತಪುರಂ-ಶೋರ್ನೂರ್ ವೇನಾಡ್ ಎಕ್ಸ್‍ಪ್ರೆಸ್ ಮತ್ತು ತಿರುನಲ್ವೇಲಿ-ಪಾಲಕ್ಕಾಡ್ ಪಲರುವಿ ಎಕ್ಸ್‍ಪ್ರೆಸ್‍ಗಳ ಸಮಯವನ್ನು ಏಪ್ರಿಲ್ 28 ರಿಂದ ಬದಲಾಯಿಸಲಾಗುತ್ತದೆ.

             ವೇನಾಡ್‍ನ ತಿರುವನಂತಪುರ-ಕಾಯಂಕುಳಂ ಸಮಯ ಬದಲಾವಣೆ ಮಾಡಲಾಗಿದೆ. ಪ್ರಸ್ತುತ, ವೇನಾಡ್ ಎಕ್ಸ್‍ಪ್ರೆಸ್ ತಿರುವನಂತಪುರದಿಂದ ಬೆಳಿಗ್ಗೆ 5.15 ಕ್ಕೆ ಹೊರಡುತ್ತದೆ. ಆದರೆ ವೇನಾಡ್ ಎಕ್ಸ್ ಪ್ರೆಸ್ ಹತ್ತು ನಿಮಿಷ ತಡವಾಗಿ 28ರಿಂದ ಸಂಜೆ 5.25ಕ್ಕೆ ಹೊರಡಲಿದೆ.

           ಪರಿಷ್ಕøತ ವೇಳಾಪಟ್ಟಿಯ ಪ್ರಕಾರ, ವೆನಾಡ್ ಎಕ್ಸ್‍ಪ್ರೆಸ್ ಚಿರೈನ್‍ಕೀಜ್‍ಗೆ ಬೆಳಿಗ್ಗೆ 5.50 ಕ್ಕೆ, ಕಡೈಕ್ಕಾವೂರಿಗೆ 5.54 ಕ್ಕೆ, ವರ್ಕಲಾ 6.07 ಕ್ಕೆ ಮತ್ತು ಕೊಲ್ಲಂಗೆ ಬೆಳಿಗ್ಗೆ 6.34 ಕ್ಕೆ ತಲುಪಲಿದೆ. ರೈಲು 7.05 ಕ್ಕೆ ಕರುನಾಗಪ್ಪಳ್ಳಿ ಮತ್ತು 7.18 ಕ್ಕೆ ಕಾಯಂಕುಳಂ ತಲುಪಲಿದೆ. ಆದರೆ ಕಾಯಂಕುಳಂನಿಂದ ಶೋರ್ನೂರ್‍ಗೆ ಈಗಿರುವ ವೇಳಾಪಟ್ಟಿಯನ್ನೇ ಅನುಸರಿಸಲಾಗುತ್ತದೆ.

          ಕೊಲ್ಲಂನಿಂದ ಎರ್ನಾಕುಳಂ ನೋರ್ತ್ ತಿರುನಲ್ವೇಲಿ-ಪಾಲಕಾಡ್ ಪಾಲರುವಿ ಎಕ್ಸ್‍ಪ್ರೆಸ್‍ನ ಸಮಯವನ್ನು ಬದಲಾಯಿಸಲಾಗಿದೆ. ಪಾಲರುವಿ ಎಕ್ಸ್‍ಪ್ರೆಸ್ ಏಪ್ರಿಲ್ 27 ರಿಂದ 10 ನಿಮಿಷ ಮುಂಚಿತವಾಗಿ ಹೊರಡಲಿದೆ. 4.50ಕ್ಕೆ ಪಾಲರುವಿ ಹೊರಡಲಿದೆ. ಇದು ಎರ್ನಾಕುಳಂ ನೋರ್ತ್ ಗೆ ಐದು ನಿಮಿಷ ಮುಂಚಿತವಾಗಿ 8.45 ಕ್ಕೆ ಬದಲಾಗಿ 8.40 ಕ್ಕೆ ತಲುಪುತ್ತದೆ ಮತ್ತು 8.45 ಕ್ಕೆ ಹೊರಡುತ್ತದೆ. ಎರ್ನಾಕುಳಂ ನೋರ್ತ್  ನಂತರ ನಿಲ್ದಾಣಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ತಿಳಿಸಿದೆ.

          ವಂದೇಭಾರತ್ ಎಕ್ಸ್‍ಪ್ರೆಸ್ ತಿರುವನಂತಪುರಂ ಸೆಂಟ್ರಲ್ ರೈಲು ನಿಲ್ದಾಣದಿಂದ ಬೆಳಗ್ಗೆ 5.20ಕ್ಕೆ ಹೊರಡುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries