HEALTH TIPS

ಈ ತಿಂಗಳಿನಿಂದ ವಂದೇ ಭಾರತ್ ಸೇವೆ; ಇತರ ರೈಲುಗಳ ಸಮಯದಲ್ಲಿ ಬದಲಾವಣೆ


               ತಿರುವನಂತಪುರಂ: ಈ ತಿಂಗಳಲ್ಲೇ ವಂದೇ ಭಾರತ್ ಎಕ್ಸ್‍ಪ್ರೆಸ್ ಪ್ರಯಾಣ ಸೇವೆ ಲಭ್ಯವಾಗಲಿದೆ ಎಂದು ವರದಿಯಾಗಿದೆ.
              ಈ ಸಂಬಂಧ ರೈಲ್ವೆ ಮಂಡಳಿ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದೆ. ಏಪ್ರಿಲ್ 25 ರಂದು ಪ್ರಧಾನಿ ವಂದೇ ಭಾರತ್ ಎಕ್ಸ್‍ಪ್ರೆಸ್ ಅನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. 26ರಂದು ಸೇವೆ ಇಲ್ಲ. 27 ಅಥವಾ 28ರಂದು ಸೇವೆ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ತಯಾರಿ ಆರಂಭವಾಗಿದೆ.
           ವಂದೇ ಭಾರತ್ ಮಾರ್ಗವು ತಿರುವನಂತಪುರದಿಂದ ಕಾಸರಗೋಡಿನವರೆಗೂ ವಿಸ್ತರಣೆಗೊಂಡಿದೆ. ರೈಲು ವೇಳಾಪಟ್ಟಿ ಹೇಗಿದೆ ಎಂದರೆ ತಿರುವನಂತಪುರಂನಿಂದ ಬೆಳಗ್ಗೆ 5.10ಕ್ಕೆ ಹೊರಟು ಮಧ್ಯಾಹ್ನ 1.15ಕ್ಕೆ ಕಾಸರಗೋಡು ತಲುಪುತ್ತದೆ. ಅದು ಮಧ್ಯಾಹ್ನ 2.15ಕ್ಕೆ ಮತ್ತೆ ಹೊರಡಲಿದ್ದು ರಾತ್ರಿ 10.30ಕ್ಕೆ ತಿರುವನಂತಪುರಂ ತಲುಪಲಿದೆ. ವಂದೇ ಭಾರತ್‍ನ ಸಮಯವು ಇತರ ಹಲವು ರೈಲುಗಳ ಸಮಯದೊಂದಿಗೆ ಪ್ರಭಾವ ಬೀರಲಿದ್ದು  ವಂದೇ ಭಾರತ್ ವೇಳಾಪಟ್ಟಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದ ನಂತರ ರೈಲ್ವೆಯು ಇತರ ರೈಲುಗಳ ಸಮಯ ಬದಲಾವಣೆಗಳನ್ನು ಪ್ರಕಟಿಸುತ್ತದೆ.
           ವಂದೇ ಭಾರತ್ ತಿರುವನಂತಪುರದಿಂದ ಏಳು ಗಂಟೆ 10 ನಿಮಿಷಗಳಲ್ಲಿ ಕಣ್ಣೂರು ತಲುಪಿತು. ನಂತರ ವಂದೇ ಭಾರತವನ್ನು ಕಾಸರಗೋಡಿನವರೆಗೆ ವಿಸ್ತರಿಸುವುದಾಗಿ ಘೋಷಿಸಿದ ನಂತರ ಎರಡನೇ ಪ್ರಾಯೋಗಿಕ ಸಂಚಾರದಲ್ಲಿ ವಂದೇ ಭಾರತ್ ಎಕ್ಸ್‍ಪ್ರೆಸ್ ಏಳು ಗಂಟೆ 50 ನಿಮಿಷಗಳಲ್ಲಿ ಕಾಸರಗೋಡು ತಲುಪಿತು. ಬಿಜೆಪಿ ಕಾರ್ಯಕರ್ತರು ಹಾಗೂ ಯುಡಿಎಫ್ ಕಾರ್ಯಕರ್ತರು ಅದ್ಧೂರಿಯಾಗಿ ವಂದೇ ಭಾರತ್ ಸ್ವಾಗತಿಸಿದರು. ವಿವಿಧ ಪ್ರದೇಶಗಳಲ್ಲಿ ತೆಗೆದುಕೊಳ್ಳಬಹುದಾದ ವೇಗವನ್ನು ಪರಿಶೀಲಿಸುವುದು ಮತ್ತು ಹಳಿಗಳ ದಕ್ಷತೆಯನ್ನು ಮೌಲ್ಯಮಾಪನ ಮಾಡುವುದು ಪ್ರಾಯೋಗಿಕ ರನ್‍ನ ಉದ್ದೇಶವಾಗಿತ್ತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries