ಕುಂಬಳೆ: ರಂಗ ಚೇತನ (ರಿ) ಕಾಸರಗೋಡು ಇದರ ನೇತೃತ್ವದಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕೇಂದ್ರ ಸಮಿತಿಯ ಸಹಬಾಗಿತ್ವದಲ್ಲಿ ಮೂರು ದಿನಗಳ ಚಿತ್ತಾರ "ರಂಗದ ರಂಗೋಲಿ " ಸಹವಾಸ ಶಿಬಿರ ಪೆರ್ಮುದೆ ಶಾಲೆಯಲ್ಲಿ ಆರಂಭಗೊಂಡಿದೆ.
. ಕಾರ್ಯಕ್ರಮವನ್ನು ಬಾಲನಟಿ ಪೆನ್ಸಿಲ್ ಬಾಕ್ಸ್ ಚಲನಚಿತ್ರದಲ್ಲಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿರುವ ಕು.ದೀಕ್ಷಾ ಪುತ್ತೂರು ಉದ್ಘಾಟಿಸಿದರು. ರಂಗ ಚೇತನದ ಗೌರವಾಧ್ಯಕ್ಷ ಯತೀಶ್ ಕುಮಾರ್ ರೈ ಮುಳ್ಳೇರಿಯ ಇವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ಆಳ್ವ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕೇಂದ್ರ ಸಮಿತಿಯ ಕೋಶಾಧಿಕಾರಿ ಪದ್ಮಾವತಿ ಟೀಚರ್, ವಾರ್ಡ್ ಸದಸ್ಯೆ ಇರ್ಶಾನ, ಸಾಹಿತಿ, ರಂಗ ನಟ ದಿವಾಕರ ಬಲ್ಲಾಳ್ ಉಪಸ್ಥಿತರಿದ್ದರು. ರಂಗಚೆÉೀತನ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ,ಸದಸ್ಯ ಶಿವರಾಮ್ ಮಾಸ್ತರ್ ಕಾಟುಕುಕ್ಕೆ ವಂದಿಸಿದರು. ರಂಗ ಚೇತನದ ಜೊತೆಕಾರ್ಯದರ್ಶಿ ಸದಾಶಿವ ಬಾಲಮಿತ್ರ ಕಾರ್ಯಕ್ರಮ ನಿರೂಪಿಸಿದರು.