HEALTH TIPS

ಬಿಂದು ಕೃಷ್ಣ ಪತಿಯಿಂದ ಬೆದರಿಕೆ; ಮಹಿಳಾ ಕಾಂಗ್ರೆಸ್ ನಾಯಕಿಯಿಂದ ಪೊಲೀಸರಿಗೆ ದೂರು


              ತಿರುವನಂತಪುರ: ಎಐಸಿಸಿ ಸದಸ್ಯೆ ಬಿಂದು ಕೃಷ್ಣ ಅವರ ಪತಿ ಎಸ್. ಕೃಷ್ಣಕುಮಾರ್ ವಿರುದ್ಧ ಮಹಿಳಾ ಕಾಂಗ್ರೆಸ್ ನಾಯಕಿ ಪೊಲೀಸರಿಗೆ ದೂರು ನೀಡಿದ್ದಾರೆ.
               ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ತನಗೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಮಹಿಳಾ ಕಾಂಗ್ರೆಸ್ ನಾಯಕಿ ಸುನಿತಾ ವಿಜಯನ್ ಅವರು ದೂರು ನೀಡಿದ್ದಾರೆ.
              ಮಹಿಳಾ ಕಾಂಗ್ರೆಸ್ ಪದಾಧಿಕಾರಿ ವಿಚಾರದಲ್ಲಿ ಪಕ್ಷದಲ್ಲಿ ಉಂಟಾಗಿರುವ ವಿವಾದಗಳ ಭಾಗವಾಗಿಯೇ ಈ ಆರೋಪ ಕೇಳಿಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಐ ವಿಭಾಗದ ನಾಯಕಿ ಸುನಿತಾ ವಿಜಯನ್ ಅವರು ಪದಾಧಿಕಾರಿಗಳ ಪಟ್ಟಿಯಿಂದ ಅಸಮಾಧಾನಗೊಂಡು ರಾಜ್ಯ ಕಚೇರಿಗೆ ರಾಜೀನಾಮೆ ನೀಡಿದ್ದರು. ನಂತರ ಕೃಷ್ಣಕುಮಾರ್ ಅವರು ತನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೆÇಲೀಸ್ ದೂರು ದಾಖಲಿಸಿದ್ದರು.
           ಮಹಿಳಾ ಕಾಂಗ್ರೆಸ್ ಪದಾಧಿಕಾರಿ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಭಾರೀ ಸ್ಫೋಟವಾಗಿದೆ. ಅಂತಿಮ ಪಟ್ಟಿ ಬಂದಾಗ ಕೆ.ಸಿ.ವೇಣುಗೋಪಾಲ್ ವಿಭಾಗವನ್ನು ಮಾತ್ರ ಪರಿಗಣಿಸಲಾಗಿದೆ ಎಂಬುದು ಎ-ಐ ವಿಭಾಗಗಳ ಆರೋಪ. ಮರುಸಂಘಟನೆಯಲ್ಲಿ ಸುಧಾಕರನ್ ಕಡೆಗೂ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿಲ್ಲ ಎಂಬ ದೂರುಗಳೂ ಕೇಳಿಬಂದಿವೆ.
          ಈ ಪಟ್ಟಿಯ ವಿರುದ್ಧ ಹಿರಿಯ ನಾಯಕ ರಮೇಶ ಚೆನ್ನಿತ್ತಲ ರಾಷ್ಟ್ರೀಯ ನಾಯಕತ್ವಕ್ಕೆ ಪತ್ರ ಬರೆದಿದ್ದಾರೆ. ಈಗ ಬಿಡುಗಡೆ ಮಾಡಿರುವ ಪಟ್ಟಿಯನ್ನು ಹಿಂಪಡೆಯಬೇಕು  ಎಂದು ಚೆನ್ನಿತ್ತಲ ಆಗ್ರಹಿಸಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries