ಕಾಸರಗೋಡು: ನಗರಠಾಣೆ ವ್ಯಾಪ್ತಿಯ ಮನ್ನಿಪ್ಪಾಡಿಯಲ್ಲಿ ಹನ್ನೊಂದರ ಹರೆಯದ ಬಾಲಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನ್ನಿಪ್ಪಾಡಿ ಆಲಂಕೊಡು ಹೌಸಿಂಗ್ ಕಾಲನಿ ನಿವಾಸಿ ಅನಿಲ್-ಸ್ವಾತಿ ದಂಪತಿ ಪುತ್ರ, ಅಡ್ಕತ್ತಬೈಲ್ ಸರ್ಕಾರಿ ಹಿರಿಯ ಪ್ರಥಮಿಕ ಶಾಲಾ ಆರನೇ ತರಗತಿ ವಿದ್ಯಾರ್ಥಿ ರಿತುಲ್ಕೃಷ್ಣ(11)ನೇಣಿಗೆ ಶರಣಾದ ಬಾಲಕ. ಸಂಜೆ ಆಟವಾಡಲು ತೆರಳುವುದಾಗಿ ಬಾಲಕ ತಿಳಿಸಿದ್ದು, ಬಹಳ ಹೊತ್ತಿನ ವರೆಗೂ ವಾಪಸಾಗದ ಹಿನ್ನೆಲೆಯಲ್ಲಿ ಹುಡುಕಾಡುವ ಮಧ್ಯೆ ಮನೆಯೊಳಗೆ ನೇಣಿನಲ್ಲಿ ನೇತಡುವುದು ಕಂಡುಬಂದಿತ್ತು. ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.