ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ 2022-23ನೇ ಆರ್ಥಿಕ ಯೋಜನೆಗೊಳಪಡಿಸಿ 11ನೇ ವಾರ್ಡ್ ನ ಕುಕ್ಕಿಲ-ಚಂಬ್ರಕಾನದಲ್ಲಿ ನಿರ್ಮಿಸಿದ ಕುಡಿನೀರು ಯೋಜನೆಯ ಉದ್ಘಾಟನೆ ನಡೆಸಲಾಯಿತು. ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆಎಸ್ ಉದ್ಘಾಟಿಸಿದರು. ಪಂ.ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕುಡಿನೀರಿನ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯತಿಗೆ ಉಚಿತ ಸ್ಥಳದಾನಗೈದ ಮೊಹಮ್ಮದ್ ಯೂಸುಫ್ ಚಂಬ್ರಕಾನ ಅವರನ್ನು ಫಲಾನುಭವಿಗಳ ಪರವಾಗಿ ಸನ್ಮಾನಿಸಲಾಯಿತು. ಊರ ನಾಗರಿಕರು ಭಾಗವಹಿಸಿದ್ದರು.