ಕೊಚ್ಚಿ: ರಜಾ ಕಾಲದ ತರಗತಿಗಳನ್ನು ನಿಷೇಧಿಸಿರುವ ಸರ್ಕಾರದ ಆದೇಶದ ಪರ ಹೈಕೋರ್ಟ್ ಬೆಂಬಲ ನೀಡಿದೆ. ಆದೇಶದ ವಿರುದ್ಧದ ತಡೆಯಾಜ್ಞೆಯನ್ನು ವಿಸ್ತರಿಸುವುದಿಲ್ಲ ಎಂದೂ ನ್ಯಾಯಾಲಯ ಹೇಳಿದೆ.
ಸಿಬಿಎಸ್ಇ ಸ್ಕೂಲ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಸಲ್ಲಿಸಿದ್ದ ಮನವಿಗೆ ತಡೆಯಾಜ್ಞೆ ವಿಸ್ತರಿಸಲು ನ್ಯಾಯಾಲಯ ನಿರಾಕರಿಸಿದೆ.
ಮಕ್ಕಳು ರಜಾದಿನಗಳನ್ನು ಆನಂದಿಸಲಿ. ರಜಾ ತರಗತಿಗಳ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಪಿ.ವಿ.ಕುಂಞÂಕೃಷ್ಣನ್ ಅವರು ಅಭಿಪ್ರಾಯಪಟ್ಟಿದ್ದಾರೆ. ರಜೆಯ ತರಗತಿಗಳಿಗೆ ಸಂಬಂಧಿಸಿದ ವಿಷಯವನ್ನು ವಿಭಾಗೀಯ ಪೀಠಕ್ಕೆ ಬಿಡಲಾಯಿತು. ನ್ಯಾಯಮೂರ್ತಿ ಎ.ಬದರೂದ್ ಅವರ ಪೀಠವು ಈ ಹಿಂದೆ ರಜಾ ತರಗತಿಗಳನ್ನು ನಡೆಸದಂತೆ ಸರ್ಕಾರದ ಆದೇಶಕ್ಕೆ ತಡೆ ನೀಡಿತ್ತು.