ಕಾಸರಗೋಡು: ಪಿಎಂ ಕಿಸಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಯೋಜನೆಯ ಫಲಾನುಭವಿಗಳು ಮೇ 31 ರೊಳಗೆ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಬೇಕು.
ಯೋಜನೆಯ ಪ್ರಯೋಜನಗಳನ್ನು ಪಡೆಯಲು ರೈತರು ತಮ್ಮ ಬ್ಯಾಂಕ್ ಖಾತೆಗಳನ್ನು ಆಧಾರ್ನೊಂದಿಗೆ ಲಿಂಕ್ ಮಾಡಬೇಕು. ಆಧಾರ್ ಲಿಂಕ್ ಮಾಡಿದ ಖಾತೆಗಳನ್ನು ಭಾರತೀಯ ಅಂಚೆ ಪಾವತಿ ಬ್ಯಾಂಕ್ ಮೂಲಕ ಹತ್ತಿರದ ಅಂಚೆ ಕಚೇರಿಯಲ್ಲಿ ತೆರೆಯಬಹುದು. ಈ ನಿಟ್ಟಿನಲ್ಲಿ ಮೇ 25, 26 ಮತ್ತು 27 ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು. ರೈತರು ಆಧಾರ್ ಕಾರ್ಡ್ ಮತ್ತು ಮೊಬೈಲ್ ಫೆÇೀನ್ನೊಂದಿಗೆ ಸನಿಹದ ಅಂಚೆ ಕಚೇರಿಯನ್ನು ತಲುಪಬೇಕು. ಎಲ್ಲಾ ಪಿಎಂ ಕಿಸಾನ್ ಫಲಾನುಭವಿಗಳು ನೇರವಾಗಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ಫೆÇೀನ್ನೊಂದಿಗೆ ಪಿಎಂ ಕಿಸಾನ್ ಪೆÇೀರ್ಟಲ್ ಮೂಲಕ ಅಥವಾ ಅಕ್ಷಯ, ಸಿಎಸ್ಸಿ ಮುಂತಾದ ಜನಸೇವಾ ಕೇಂದ್ರಗಳ ಮೂಲಕ ಯೋಜನೆಯ ಪ್ರಯೋಜನಗಳಿಗೆ ತಡೆರಹಿತ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಕೆವೈಸಿಯನ್ನು ಕೇಂದ್ರ ಸರ್ಕಾರವು ಅಭಿವೃದ್ಧಿಪಡಿಸಿದ ಆಂಡ್ರಾಯ್ಡ್ ಅಪ್ಲಿಕೇಶನ್ ಮೂಲಕವೂ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಮೇ 22 ರಿಂದ ಮೇ 27 ರವರೆಗೆ ಅಕ್ಷಯ ಕೇಂದ್ರಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಕೃಷಿ ಭವನಕ್ಕೆ ಭೇಟಿ ನೀಡುವುದು ಅಥವಾ ಟೋಲ್ ಫ್ರೀ ಸಂಖ್ಯೆ (1800-425-1661 . ದೂರವಾಣಿ- 0471-2304022, 0471-2964022)ಸಮಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.