ಕಾಸರಗೋಡು: ನೀಲೇಶ್ವರ ನಗರಸಭೆ ಆಶ್ರಯದಲ್ಲಿ ಕಸಮುಕ್ತ ನವಕೇರಳ ಶಿಬಿರದ ಅಂಗವಾಗಿ ಎಲ್ಲ ವಾರ್ಡ್ ಗಳಲ್ಲಿ ನಡೆಯಲಿರುವ ಸ್ವಚ್ಛತಾ ಕಾರ್ಯಕ್ಕೆ ನಗರಸಭಾ ಅಧ್ಯಕ್ಷೆ ಟಿ.ವಿಶಾಂತಾ ಚಾಲನೆ ನೀಡಿದರು. ಈ ಮೂಲಕ ಮಳೆಗಾಲಪೂರ್ವ ಶುಚೀಕರಣ ಕಾರ್ಯವನ್ನೂ ಆರಂಭೀಸಲಾಯಿತು. ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಪಿ ರವೀಂದ್ರನ್, ಸಿಡಿಎಸ್ ಉಪಾಧ್ಯಕ್ಷೆ ಎಂ.ಶಾಂತಾ, ¥ನಗರಸಭೆ ಆರೋಗ್ಯ ಮೇಲ್ವಿಚಾರಕ ಟಿ.ಅಜಿತ್ ಉಪಸ್ಥಿತರಿದ್ದರು.
ಪ್ರತಿ ವಾರ್ಡ್ನಲ್ಲಿ ಕೌನ್ಸಿಲರ್ಗಳು, ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು, ವಸತಿ ಸಂಘಗಳ ಸದಸ್ಯರು, ಕುಟುಂಬಶ್ರೀ-ಹಸಿರು ಕ್ರಿಯಾ ಸೇನೆ, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಯುವ ಸ್ವಯಂಸೇವಾ ಸಂಸ್ಥೆಗಳು ಮತ್ತು ಕ್ಲಬ್ಗಳ ಸಹಭಾಗಿತ್ವದಲ್ಲಿ ಸಾಮೂಹಿಕ ಕ್ರಮದ ಮೂಲಕ ಶಾಲಾ ವಿದ್ಯರ್ಥಿಗಳನ್ನೂ ಒಳಪಡಿಸಿ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳು ಮತ್ತು ಜಲಾನಯನ ಪ್ರದೇಶಗಳಿಂದ ಕಸ ತೆಗೆದು ಶುಚೀಕರಣ ಕಾರ್ಯ ನಡೆಸಲಾಯಿತು. ಈ ಮೂಲಕ ಪ್ರತಿ ವಾರ್ಡ್ಗಳನ್ನು ಕಸ ಮುಕ್ತ ವಾರ್ಡ್ ಎಂದು ಘೋಷಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.