ಮುಳ್ಳೇರಿಯ: ಗ್ರ್ಯಾಂಡ್ ಮಾಸ್ಟರ್ ಮಾರ್ಷಲ್ ಆಟ್ರ್ಸ್ ಅಕಾಡೆಮಿಯ ನೇತೃತ್ವದಲ್ಲಿ ಚೆರ್ವತ್ತೂರಿನಲ್ಲಿ ನಡೆದ ಮಾರ್ಷಲ್ ಆಟ್ರ್ಸ್ ಫೆಸ್ಟ್ ಸಮಾರೋಪಗೊಂಡಿತು. ಕಾಸರಗೋಡು ಜಿಲ್ಲೆ 122 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಣ್ಣೂರು 76 ಅಂಕ ಪಡೆದು ರನ್ನರ್ ಅಪ್ ಆಯಿತು. ತ್ರಿಶೂರ್ 58 ಅಂಕ ಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿತು.
ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ಮಲಪ್ಪುರಂ ಮತ್ತು ತ್ರಿಶೂರ್ ಜಿಲ್ಲೆಗಳಿಂದ ಸುಮಾರು 190 ವಿದ್ಯಾರ್ಥಿಗಳು ಫೆಸ್ಟ್ನಲ್ಲಿ ಭಾಗವಹಿಸಿದ್ದರು. ಕಿಕ್ ಸ್ಪರ್ಧೆ, ಕರಾಟೆ ಕಟಾಸ್, ಕರಾಟೆ ನಮೂನೆಗಳು, ಟೇಕ್ವಾಂಡೋ ಪೂಮ್ಸಾ ಮತ್ತು ವುಶು ತವಲ್ ಸ್ಪರ್ಧೆಗಳು ನಡೆದವು.
ಕುಟ್ಟಮತ್ ಪೂಮಾಲ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆರ್ವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ವಿ. ಪ್ರಮೀಳಾ ಉದ್ಘಾಟಿಸಿದರು. ಪಂಚಾಯಿತಿ ಉಪಾಧ್ಯಕ್ಷ ರಾಜೇಂದ್ರನ್ ಪಯಾಯತಕತ್ ಉಪಸ್ಥಿತರಿರು. ಪಿ.ವಿ.ಅನಿಲಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ ಕಣ್ಣನ್ ಕುಂಞÂ್ಞ, ತರಬೇತುದಾರರಾದ ರಾಜು, ಅಜೇಶ್ ಸಿ.ಎಂ ಮಾತನಾಡಿದರು. ಏಷ್ಯನ್ ಯೂತ್ ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಶಾಟ್ಪುಟ್ನಲ್ಲಿ ಕಂಚಿನ ಪದಕ ಗೆದ್ದ ಅನುಪ್ರಿಯಾ ಅವರು ಸಮಾರೋಪವನ್ನು ಉದ್ಘಾಟಿಸಿದರು. ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಅಚ್ಯುತನ್ ಮುಖ್ಯ ಅತಿಥಿಯಾಗಿದ್ದರು. ನಂತರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.