ಕಾಸರಗೋಡು: ಜನತೆಯ ಕುಂದುಕೊರತೆಗಳ ಸಕಾಲಿಕ ಪರಿಹಾರಕ್ಕೆ ಪರಿಣಾಮಕಾರಿ ಮಧ್ಯಸ್ಥಿಕೆ ವಹಿಸಲಾಗುವುದು ಎಂದು ಕೇರಳ ವಿಧಾನಸಭೆ-ಯುವ ಕಲ್ಯಾಣ ಮತ್ತು ಯುವಜನ ವ್ಯವಹಾರಗಳ ಸಮಿತಿ ಅಧ್ಯಕ್ಷ, ಶಾಸಕ ಕೆ.ವಿ.ಸುಮೇಶ್ ತಿಳಿಸಿದ್ದರೆ.
ಅವರು ಕಾಸರಗೋಡು ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್ ಹಾಲ್ನಲ್ಲಿ ನಡೆದ ಸಾಕ್ಷ್ಯ ಸಂಗ್ರಹಣೆಯಲ್ಲಿ ಮಾತನಾಡಿದರು. ಕಾಸರಗೋಡು ಜಿಲ್ಲೆಯಲ್ಲಿ ಕಡಿಮೆ ದೂರುಗಳು ದಾಖಲಾಗುತ್ತಿದ್ದು, ಲಬಿಸುವ ದೂರುಗಳನ್ನು ಸಕಾಲದಲ್ಲಿ ಪರಿಹರಿಸಲಾಗುತ್ತದೆ. ಜಿಲ್ಲೆಗೆ ಮಂಜೂರಾಗಿರುವ ಸಾಹಸ ಅಕಾಡೆಮಿ, ಯುವ ವಸತಿ ನಿಲಯ, ಯುವ ಕಲ್ಯಾಣ ಮಂಡಳಿಯ ಜಿಲ್ಲಾ ಕಚೇರಿಗೆ ಕಚೇರಿ ಸೌಲಭ್ಯ ಹಾಗೂ ಜಿಲ್ಲೆಯಲ್ಲಿ ಈ ಹಿಂದೆ ಮಂಜೂರಾಗಿದ್ದ ಸಿಂಥೆಟಿಕ್ ಟ್ರ್ಯಾಕ್ ಸೇರಿದಂತೆ ಮೈದಾನದ ತಾಂತ್ರಿಕ ಸಮಸ್ಯೆ ಹಾಗೂ ಜಾಗದ ಲಭ್ಯತೆ ಪರಿಗಣಿಸಿ ತ್ವರಿತಗೊಳಿಸುವಂತೆ ವಿಧಾನಸಭೆ ಸಮಿತಿ ಶಿಫಾರಸು ಮಾಡಿದೆ. ಸಮಿತಿಗೆ ಜಿಲ್ಲೆಯಿಂದ ಬಂದ ಅರ್ಜಿಗಳ ಮೇಲೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸಾಕ್ಷ್ಯ ತೆಗೆದುಕೊಳ್ಳಲಾಯಿತು. ಯುವ ಮತ್ತು ಯುವ ಸಂಘಟನೆಗಳಿಂದ ಹೊಸ ದೂರು ಲಭಿಸಿದ್ದು, ಕಾಸರಗೋಡು ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆದ ಸಾಕ್ಷ್ಯ ಸಂಗ್ರಹಣೆ ಸಭೆಯಲ್ಲಿ ನಾಲ್ಕು ದೂರುಗಳಿಗೆ ಪರಿಹಾರ ಕಲ್ಪಿಸಲಾಯಿತು.
ಕೇರಳ ವಿಧಾನಸಭೆ-ಯುವಜನ ಕಲ್ಯಾಣ ಮತ್ತು ಯುವಜನ ವ್ಯವಹಾರಗಳ ಸಮಿತಿಯ ಸದಸ್ಯರಾದ ಎಂ.ವಿಜಿನ್ ಶಾಸಕ, ಮೊಹಮ್ಮದ್ ಮುಹ್ಸಿನ್ ಶಾಸಕ ಮತ್ತು ಎಂ.ಎಸ್.ಅರುಣ್ ಕುಮಾರ್ ಶಾಸಕ ಮಾತನಾಡಿದರು. ಎಡಿಎಂ ಕೆ.ನವೀನ್ ಬಾಬು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿಧಾನಸಭೆ ಸಮಿತಿ ಸಿಬ್ಬಂದಿ, ಸಂಘಟನೆ ಪ್ರತಿನಿಧಿಗಳು ಹಾಗೂ ಅರ್ಜಿದಾರರು ಭಾಗವಹಿಸಿದ್ದರು.