HEALTH TIPS

ಐದು ದಶಕಗಳ ಬಳಿಕ ಶಿಕ್ಷಕಿಯ ಮನೆಗೆ ಭೇಟಿ ನೀಡಿದ ಉಪರಾಷ್ಟ್ರಪತಿ ಜಗದೀಪ್ ಧನಕರ್: ಇದಕ್ಕಿಂತ ದೊಡ್ಡ ಗುರುದಕ್ಷಿಣೆ ಬೇರಿಲ್ಲ ಎಂದ ರತ್ನಾ ನಾಯರ್

               ಕಣ್ಣೂರು: ಮಾಜಿ ಶಿಕ್ಷಕಿ ರತ್ನಾ ನಾಯರ್ ಅವರನ್ನು ಭೇಟಿ ಮಾಡಲು ಉಪರಾಷ್ಟ್ರಪತಿ ಜಗದೀಪ್ ಧನಕರ್ ಕಣ್ಣೂರಿಗೆ ಬಂದಿದ್ದರು. ಪಾನೂರು ಚಂಪಾಡ್ ಆನಂದವೀಟ್ ನಲ್ಲಿ ರತ್ನಾ ನಾಯರ್ (83) ಅವರನ್ನು ಭೇಟಿ ಮಾಡಿದರು. 

      ಉಪರಾಷ್ಟ್ರಪತಿ ಅವರನ್ನು ಹಾರ್ಧಿಕವಾಗಿ ಬರಮಾಡಿಕೊಳ್ಳಲಾಯಿತು. ರತ್ನಾ ನಾಯರ್ ಧನಕರ್ ಅವರಿಗೆ ಬಿಸಿಬಿಸಿ ಇಡ್ಲಿ ನೀಡಿ ಉಪಚರಿಸಿದರು. 

         ಕೇರಳ ವಿಧಾನಸಭೆ ಸ್ಪೀಕರ್ ಎ.ಎನ್. ಶಂಸೀರ್ ಕೂಡ ಭೇಟಿಯ ಭಾಗವಾಗಿದ್ದರು. ಉತ್ತಮವಾದ ಗುರುದಕ್ಷಿಣೆಯನ್ನು ಯಾವ ಶಿಷ್ಯನಿಗೂ ಸಾಧ್ಯವಾಗದೇನೋ ಎಂದು ಉಪರಾಷ್ಟ್ರಪತಿ ತಿಳಿಸಿದರು. ಜಗದೀಪ್ ಧನಕರ್ ಅವರೊಂದಿಗಿನ ಭೇಟಿಯ ಸಮಯದಲ್ಲಿ, ತರಗತಿಯ ಮುಂಭಾಗದ ಬೆಂಚ್‍ನಲ್ಲಿ ಸಂಪೂರ್ಣ ಏಕಾಗ್ರತೆಯಿಂದ ಕುಳಿತಿದ್ದ ಹುಡುಗನನ್ನು ಇನ್ನೂ ನೆನಪಿಸಿಕೊಳ್ಳುತ್ತೇನೆ ಎಂದು ಶಿಕ್ಷಕಿ ಹೇಳಿದರು. ಈ ಭೇಟಿ ಮತ್ತು ಉಪರಾಷ್ಟ್ರಪತಿ ಸ್ಥಾನಕ್ಕೇರಿರುವುದೇ ಗುರುದಕ್ಷಿಣೆ ಎಂದು ರತ್ನಾ ನಾಯರ್ ತಿಳಿಸಿದರು.

           ರತ್ನಾ 1968ರಲ್ಲಿ ರಾಜಸ್ಥಾನದ ಚಿತ್ತೋಗ್ರ್ರಾ ಮಿಲಿಟರಿ ಶಾಲೆಯಲ್ಲಿ ಜಗದೀಪ್ ಧನಕರ್ ಅವರಿಗೆ ಶಿಕ್ಷಕಿಯಾಗಿದ್ದರು. ಸೈನಿಕ ಶಾಲೆಯಲ್ಲಿ ಧನಕರ್ ಅವರಿಗೆ ಕಲಿಸಿದ ಶಿಕ್ಷಕರಲ್ಲಿ ರತ್ನಾ ನಾಯರ್ ಮಾತ್ರ ಇಂದು ಜೀವಂತವಾಗಿದ್ದಾರೆ. ಉಪರಾಷ್ಟ್ರಪತಿ ಪ್ರತಿಜ್ಞಾ ವಿಧಿಗೆ ಆಹ್ವಾನಿಸಿದ್ದರೂ ಸಮಾರಂಭಕ್ಕೆ ಅನಾರೋಗ್ಯದ ಕಾರಣ ಅವರು ಅಂದು ಭಾಗವಹಿಸಲು ಸಾಧ್ಯವಾಗಿರಲಿಲ್ಲ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries