ಕಾಸರಗೋಡು: ಅಂತಾರಾಷ್ಟ್ರೀಯ ಪರಿಸರ ದಿನದ ಅಂಗವಾಗಿ ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆ ಕಾಸರಗೋಡು ಸಾಮಾಜಿಕ ಅರಣ್ಯ ವಿಭಾಗ ಹಾಗೂ ಪೇರಡ್ಕದ ಪಯಸ್ವಿನಿ ವನಸಂರಕ್ಷಣಾ ಸಮಿತಿ, ಮಹಾತ್ಮಜಿ ವಾಚನಾಲಯ ಮತ್ತು ಗ್ರಂಥಾಲಯ ವತಿಯಿಂದ ಬಾಲವೇದಿ ಮಕ್ಕಳಿಗಾಗಿ ಅರಣ್ಯ ಪ್ರವಾಸ ಮತ್ತು ಪ್ರಕೃತಿ ಅಧ್ಯಯನವನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ಮುಜಳಿಯಾರು ಗ್ರಮ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಇ. ಮೋಹನನ್ ಉದ್ಘಾಟಿಸಿದರು. ಮುಳಿಯಾರ್ ಪಂಚಾಯತ್ ಹಿತರಕ್ಷಣಾ ಸ್ಥಾಯಿ ಸಮಿತಿ ಅಧ್ಯಕ್ಷ ವಾಚನಾಲಯ ಅಧ್ಯಕ್ಷ ಕೆ.ರಘು ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ಮತ್ತು ಮನೋವೈದ್ಯಕೀಯ ಸಮಾಜ ಸೇವಕ ನಿಖಿಲ್ ಮ್ಯಾಥ್ಯೂ ಪ್ರಕೃತಿ ಅಧ್ಯಯನ ತರಗತಿಗೆ ನೇತೃತ್ವ ನೀಡಿದರು. ಕಾಸರಗೋಡು ತಾಲೂಕು ಗ್ರಂಥಾಲಯ ಮಂಡಳಿ ಜಂಟಿಕಾರ್ಯದರ್ಶಿ ಪ್ರದೀಪ್ ಕಲ್ಲಳ್ಳಿ, ಪನಸ್ವಿನಿ ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಗೋಪಾಲನ್, ಮುಕುಂದನ್, ಸಿ.ವಿನೋದ್ ಕುಮಾರ್, ರವಿ ಕೆ.ಉಪಸ್ಥಿತರಿದ್ದರು. ಗ್ರಂಥಾಲಯ ಕಾರ್ಯದರ್ಶಿ ಸತ್ಯನ್ ಕೆ. ಸ್ವಾಗತಿಸಿದರು. ಕಾಸರಗೋಡು ಸಾಮಾಜಿಕ ಅರಣ್ಯಾಧಿಕಾರಿ ವಿಜಯನಾಥ್ ಕೆ.ಆರ್. ವಂದಿಸಿದರು.