ಕಾಸರಗೋಡು: ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳಿಂದ ಸಮುದಾಯಕ್ಕೆ ಅಗತ್ಯವಿರುವ ಪರವಾನಗಿ ಸೇರಿದಂತೆ ಸೇವೆಗಳು ಲಭ್ಯವಾಗಿಸುವ ನಿಟ್ಟಿನಲ್ಲಿ ಸಿಟಿಜನ್ ಅಸಿಸ್ಟೆಂಟ್ ಎಂಬ ಹೆಸರಿನಡಿಯಲ್ಲಿ ರಚಿಸಲಾದ ಶಾಶ್ವತ ಅದಾಲತ್ ವ್ಯವಸ್ಥೆಯ ಅದಾಲತ್ ಕಾಸರಗೋಡಿನಲ್ಲಿ ಜರುಗಿತು.
ಕಟ್ಟಡ ಪರವಾನಗಿ, ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಿಕೆ, ಕಟ್ಟಡ ಸಂಖ್ಯೆ, ಪರವಾನಗಿ, ಜನನ, ಮರಣ ಮತ್ತು ವಿವಾಹ ನೋಂದಣಿ ಸೇವೆಗಳಿಗೆ ಸ್ಥಳೀಯಾಡಲಿತ ಅಧಿಕಾರಿಗಳಿಂದ ನಿಗದಿತ ಕಾಲಮಿತಿಯೊಳಗೆ ತಿರ್ಪು ಲಭಿಸದಿದ್ದಲ್ಲಿhttps://edalat.lsgkerala.gov ಲಿಂಕ್ನಲ್ಲಿ ಸಹಾಯ ಪೆÇೀರ್ಟಲ್ನಲ್ಲಿ ಸಾರ್ವಜನಿಕರಿಗಾಗಿ ಸಹಾಯಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಮೇ 20 ರಂದು ಕಾಸರಗೋಡು ಜಿಲ್ಲೆಯ ಉಪಜಿಲ್ಲಾ ಮತ್ತು ಜಿಲ್ಲಾ ಮಟ್ಟದ ಸಮಿತಿಗಳ ಸಭೆ ನಡೆಸಲಾಯಿತು. ಉಪಜಿಲ್ಲಾ ಅದಾಲತ್ ಸಮಿತಿಯು ಸ್ವೀಕರಿಸಿದ ಮೂರು ಅರ್ಜಿಗಳ ಬಗ್ಗೆ ತೀರ್ಮಾನಿಸಲಾಯಿತು. ಜಿಲ್ಲಾ ಮಟ್ಟದ ಅದಾಲತ್ ಸಮಿತಿಯು ಉಪಜಿಲ್ಲಾ ಮಟ್ಟದ ಅದಾಲತ್ ಸಮಿತಿಗಳ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡಲಾಯಿತು. ಜಿಲ್ಲಾ ಮಟ್ಟದ ಅದಾಲತ್ ಸಮಿತಿಯಲ್ಲಿ ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಅಧ್ಯಕ್ಷರು ಜಿಲ್ಲಾ ಮಟ್ಟದ ಅದಾಲತ್ ಸಮಿತಿ ಸಭೆಯಲ್ಲಿ ಸ್ಥಳೀಯ ಸ್ವಯಂ ಆಡಳಿತ ಇಲಾಖೆಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ, ಸಂಚಾಲಕ ಸ್ಥಳೀಯಾಡಳಿತ ಇಲಾಖೆ ಸಹಾಯಕ ನಿರ್ದೇಶಕ ಬಿ.ಎನ್.ಸುರೇಶ್, ಸದಸ್ಯರಾದ ಜಿಲ್ಲಾ ಟೌನ್ ಪ್ಲಾನರ್ ಲೀಲಿತಿ ಥಾಮಸ್, ಸ್ಥಳೀಯ ಸ್ವ-ಸರ್ಕಾರ ಇಲಾಖೆ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಕೆ.ಟಿ.ಅನಿಲ್ದಾಸ್ ಭಾಗವಹಿಸಿದ್ದರು. ಸಾರ್ವಜನಿಕರು ನಾಗರಿಕ ಸಹಾಯಕ ಅದಾಲತ್ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಭೆ ವಿನಂತಿಸಿತು.