ಕಾಸರಗೋಡು: ಯುವಜನ ಕಲ್ಯಾಣ ಮತ್ತು ಯುವ ವ್ಯವಹಾರಗಳ (2021-23) ಕೇರಳ ವಿಧಾನಸಭಾ-ಸಮಿತಿ ಸಭೆ ಮೇ 24 ರಂದು ಬುಧವಾರ ಬೆಳಿಗ್ಗೆ 10.30 ಕ್ಕೆ ಕಾಸರಗೋಡು ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ಜರುಗಲಿದೆ.
ಜಿಲ್ಲಾ ಮಟ್ಟದ ಸಮಿತಿಯು ಜಿಲ್ಲೆಯಿಂದ ಸ್ವೀಕರಿಸಿದ ಅರ್ಜಿಗಳ ಆಧಾರದಲ್ಲಿ ಜಿಲ್ಲೆಯ ಅಧಿಕಾರಿಗಳಿಂದ ಸಾಕ್ಷ್ಯ ಪಡೆದುದುಕೊಳ್ಳಲಾಗುವುದುದೀ ಸಂದರ್ಭ ಯುವ ಜನತೆಯಿಂದ ಮತ್ತು ಯುವ ಸಂಘಟನೆಗಳಿಂದ ಹೊಸ ದೂರುಗಳನ್ನು ಸ್ವೀಕರಿಸಲಾಗುವುದು. ಸಮಿತಿಯ ಮುಂದೆ ದೂರು ಸಲ್ಲಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಯ ಪ್ರತಿನಿಧಿಗಳು ಸಭೆಗೆ ಹಾಜರಾಗಬಹುದು ಮತ್ತು ಸಿದ್ಧಪಡಿಸಿದ ಸಹಿ ಮಾಡಿದ ದೂರು ಯಾ ಅರ್ಜಿಗಳನ್ನು ಸಮಿತಿಯ ಅಧ್ಯಕ್ಷರಿಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.