ಕಾಸರಗೋಡು: ಜಿಲ್ಲೆಯ ಮಾನ್ಯ ಕೆಸಿಎ ಸ್ಟೇಡಿಯಂ ಹಾಗೂ ತಲಶ್ಶೇರಿಯ ಕೆಸಿಎ ಸ್ಟೇಡಿಯಂನಲ್ಲಿ ಮೇ 23ರಿಂದ ನಡೆಯಲಿರುವ 23 ವರ್ಷದೊಳಗಿನ ಉತ್ತರ ವಲಯ ಕ್ರಿಕೆಟ್ ಅಂತರ್ ಪ್ರಾದೇಶಿಕ ಟೂರ್ನಿಯಲ್ಲಿ ಮಂಜೇಶ್ವರದ ಮುಹಮ್ಮದ್ ಕೈಫ್ ಕಾಸರಗೋಡು ಜಿಲ್ಲಾ ತಂಡವನ್ನು ಮುನ್ನಡೆಸಲಿದ್ದಾರೆ. ಅಭಿಜಿತ್ ಕೆ ಉಪ ನಾಯಕನಾಗಿರುವರು.
ಜಗನಾಥ್, ಅಬ್ದುಲ್ ಫರ್ಹಾನ್ ಟಿ.ಕೆ, ಅತುಲ್ ಪಿ, ಮುಹಮ್ಮದ್ ಸಾಬಿರ್, ಸನದ್, ತುಷಾರ್ ಬಿಕೆ, ಮಿಥುನ್ ಎಂ, ಶ್ರೀಚಂದ್ ಕೃಷ್ಣನ್ ಕೆ, ಆದರ್ಶ್ ಕೆ, ಮುಹಮ್ಮದ್ ಅಶ್ಫಾಕ್ ಪಿಆರ್, ಆಜಾದ್ ಕೆಆರ್, ಮುಹಮ್ಮದ್ ಜಸೀಲ್ ಟಿಎಂ, ಅಬ್ದುಲ್ ಫಾಹಿಸ್ ಎಂಎ, ಶ್ರೀಧರ್ಶ್ ದಿನೇಶ್, ಅಶ್ವಿನ್ ಕುಮಾರ್ ಎ ತಂಡದ ಇತರ ಆಟಗಾರರಾಗಿದ್ದರೆ.