HEALTH TIPS

ಮಹಾಕಾಳೇಶ್ವರ ದೇವಸ್ಥಾನ: ನೇಪಾಳ ಪ್ರಧಾನಿ ಪ್ರಾರ್ಥನೆ

               ಜ್ಜಯಿನಿ: ನೇಪಾಳ ಪ್ರಧಾನಿ ಪುಷ್ಪಕಮಲ್‌ ದಹಲ್‌ ಪ್ರಚಂಡ ಅವರು ಇಲ್ಲಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅವರು ಎರಡು ದಿನಗಳ ಮಧ್ಯಪ್ರದೇಶ ಭೇಟಿಯಲ್ಲಿದ್ದಾರೆ.

                12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಪ್ರಚಂಡ ಅವರನ್ನು ರಾಜ್ಯಪಾಲ ಮಂಗುಬಾಯ್‌ ಪಟೇಲ್ ಹಾಗೂ ಸಚಿವರಾದ ಮೋಹನ್‌ ಯಾದವ್‌ ಮತ್ತು ಜಗದೀಶ್‌ ದೇವಾ ಸ್ವಾಗತಿಸಿದರು.

                ದೇವಸ್ಥಾನದ ಗರ್ಭಗುಡಿಯೊಳಗೆ ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸಿದ ಪ್ರಚಂಡ ಅವರು, ದೇವಾಲಯಕ್ಕೆ 100 ರುದ್ರಾಕ್ಷಿ ಮತ್ತು ₹51 ಸಾವಿರವನ್ನು ಅರ್ಪಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

            ಬಳಿಕ ಇಂಧೋರ್‌ಗೆ ತೆರಳಿದ ಅವರು, ನಿಗದಿಯಂತೆ ರಾಜ್ಯಪಾಲರನ್ನು ಭೇಟಿಯಾಗಿ, ಸ್ಥಳೀಯ ಆಡಳಿತ ನಿರ್ವಹಿಸುತ್ತಿರುವ 'ಘನ ತ್ಯಾಜ್ಯ ನಿರ್ವಹಣಾ ಘಟಕ'ಕ್ಕೆ ಭೇಟಿ ನೀಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries