HEALTH TIPS

ಚಿರತೆ ದಾಳಿಗೆ ಬಾಲಕ ಬಲಿ: ತಿರುಪತಿ ಕಾಲುದಾರಿಗೆ ತಂತಿಬೇಲಿ ನಿರ್ಮಿಸಲು ಟಿಟಿಡಿ ನಿರ್ಧಾರ

             ತಿರುಪತಿ: ತಿರುಪತಿಯ ಅಲಿಪಿರಿ ಕಾಲುದಾರಿ ಮಾರ್ಗದಲ್ಲಿ ಗುರುವಾರ ರಾತ್ರಿ ಮೂರು ವರ್ಷದ ಬಾಲಕನ ಮೇಲೆ ಚಿರತೆ ದಾಳಿಯಾದ ಬೆನ್ನಲ್ಲೇ, ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟುವಿನ ಕಾಲುದಾರಿಗಳ ಮಾರ್ಗದ ಎರಡೂ ಬದಿಗಳಲ್ಲಿ ತಂತಿಬೇಲಿ ನಿರ್ಮಿಸುವುದಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶುಕ್ರವಾರ ಘೋಷಿಸಿದೆ.

                ಅಲಿಪಿರಿ ಕಾಲುದಾರಿ ಮಾರ್ಗದ ಏಳನೇ ಮೈಲಿಯ ಆಂಜನೇಯ ಸ್ವಾಮಿ ಪ್ರತಿಮೆ ಬಳಿ ಚಿರತೆಯು ಬಾಲಕನ ಮೇಲೆ ರಾತ್ರಿ 10 ಗಂಟೆ ಸುಮಾರಿಗೆ ದಾಳಿ ಮಾಡಿದೆ. ಬಾಲಕನ ಕುತ್ತಿಗೆಗೆ ಗಂಭೀರ ಗಾಯವಾಗಿದ್ದು, ಟಿಟಿಡಿಯ ಶ್ರೀ ಪದ್ಮಾವತಿ ಮಕ್ಕಳ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಟಿಟಿಡಿ ಅಧ್ಯಕ್ಷ ವೈ.ಎ. ಸುಬ್ಬಾ ರೆಡ್ಡಿ ಅವರು ಆಸ್ಪತ್ರೆಗೆ ತೆರಳಿ ಬಾಲಕನ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಟಿಟಿಡಿ ಪ್ರಕಟಣೆ ಹೊರಡಿಸಿದ್ದು, 'ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟುವಿನ ಕಾಲುದಾರಿಗಳ ಮಾರ್ಗದ ಎರಡೂ ಬದಿಗಳಲ್ಲಿ ತಂತಿಬೇಲಿ ನಿರ್ಮಿಸುವ ಮೂಲಕ, ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರವಹಿಸಲಾಗುವುದು' ಎಂದು ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries