ಮಧೂರು: ಕೂಟಮಹಾಜಗತ್ತು ಸಾಲಿಗ್ರಾಮ, ಕಾಸರಗೋಡು ಅಂಗಸಂಸ್ಥೆಯ ವತಿಯಿಂದ ಸೆಪ್ಟೆಂಬರ್ 24 ರಂದು ಅಖಿಲ ಭಾರತ ಕೂಟಬ್ರಾಹ್ಮಣರ ಮಹಾ ಅಧಿವೇಶನ ಕಾಸರಗೋಡಿನ ಬೇಳ ಸಮೀಪದ ಕುಮಾರಮಂಗಲ ಕ್ಷೇತ್ರದ ಸಭಾಂಗಣದಲ್ಲಿ ಜರಗಲಿರುವುದು. ಇದರ ಪೂರ್ವಭಾವೀ ಸಭೆ ಮಧೂರು ಸಮೀಪದ ಪರಕ್ಕಿಲ ಕ್ಷೇತ್ರದ ಸಭಾಂಗಣದಲ್ಲಿ ಭಾನುವಾರ ಜರಗಿತು. ಯಸ್. ಯನ್ ಮಯ್ಯ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಹಿರಿಯರಾದ ವಾಸುದೇವ ಹೊಳ್ಳ, ಕೃಷ್ಣ ಹೊಳ್ಳ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ವಿವಿಧ ಸಮಿತಿಗಳನ್ನು ರೂಪೀಕರಿಸಲಾಯಿತು. ಜು.2 ರಂದು ಸಿರಿಬಾಗಿಲು ರಾಮಕೃಷ್ಣ ಮಯ್ಯರ ಮನೆಯಲ್ಲಿ ನಡೆಯುವ ಸಂಪರ್ಕ ಸಭೆಯಲ್ಲಿ ಎಲ್ಲಾ ವಿಚಾರಗಳನ್ನು ಚರ್ಚಿಸಲಾಗುವುದು.ಅಂಗಸಂಸ್ಥೆಯ ಕೂಟ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕಾಗೆ ವಿನಂತಿ.