ಪೆರ್ಲ: ಜಿ ಎಚ್ ಎಸ್ ಎಸ್ ಪಡ್ರೆ ವಾಣಿನಗರ ಶಾಲೆಯಲ್ಲಿ ವಿಶ್ವ ಹಿರಿಯರ ದೌರ್ಜನ್ಯ ವಿರುದ್ಧ ಜಾಗೃತಿ ದಿನವನ್ನು ಆಚರಿಸಲಾಯಿತು.
ಪಡ್ರೆ ಶಾಲಾ ಪರಿಸರದ ಹಿರಿಯ ನಾಟಿ ವೈದ್ಯೆ ಸುಶೀಲ ಕುತ್ತಾಜೆ ಇವರನ್ನು ವಿಶೇಷ ಅಸೆಂಬ್ಲಿಯಲ್ಲಿ ಶಾಲು ಹೊದಿಸಿ, ಫಲ ಪುಷ್ಪಗಳನ್ನು ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಮಕ್ಕಳು ಸಮಾಜದ ಒಳಿತಿಗಾಗಿ ಹಿರಿಯ ನಾಗರಿಕರು ನೀಡಿದ ಕೊಡುಗೆಗಳನ್ನು ಆದರದಿಂದ ಸ್ಮರಿಸಿದರು. ಹಿರಿಯ ನಾಗರಿಕರ ಹಕ್ಕುಗಳ ಉಲ್ಲಂಘನೆಯ ವಿರುದ್ಧ ನಾವು ಯಾವಾಗಲೂ ಜಾಗರೂಕರಾಗಿರುತ್ತೇವೆ ಹಾಗೂ ಅದನ್ನು ಚಾಚೂ ತಪ್ಪದೆ ಪಾಲನೆ ಮಾಡುತ್ತೇವೆ ಎಂದು ಪ್ರತಿಜ್ಞೆ ಗೈದರು. ಶಾಲಾ ಮುಖ್ಯ ಅಧ್ಯಾಪಕರು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.

.jpg)
